HEALTH TIPS

ನನ್ನ ಸಚಿವ ಸ್ಥಾನಕ್ಕೆ ಸದಾನಂದನ್‌ ಬರಲಿ: ಸುರೇಶ್ ಗೋ‍ಪಿ ಇಂಗಿತ!

ಕಣ್ಣೂರು: ಕೇಂದ್ರ ಸಚಿವ ಸುರೇಶ್ ಗೋ‍ಪಿ ಅವರು ತಮ್ಮ ಸ್ಥಾನವನ್ನು ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನೂತನವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸದಸ್ಯ ಸಿ.ಸದಾನಂದನ್‌ ಮಾಸ್ಟರ್ ಅವರನ್ನು ತಮ್ಮ ಸ್ಥಾನಕ್ಕೆ ನೇಮಕ ಮಾಡಬೇಕೆಂಬ ಶಿಫಾರಸನ್ನೂ ಅವರು ಭಾನುವಾರ ಮುಂದಿಟ್ಟರು.

ಗೋಪಿ ಅವರು ಪೆಟ್ರೋಲಿಯಂ ಮತ್ತು ‍ಪ್ರವಾಸೋದ್ಯಮ ಖಾತೆಯ ರಾಜ್ಯ ಖಾತೆ ಸಚಿವವಾಗಿದ್ದಾರೆ.

ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು 'ನನ್ನನ್ನು ತೆಗೆದ ಮೇಲೆ ಸದಾನಂದನ್‌ ಅವರನ್ನು ಸಚಿವರನ್ನಾಗಿ ನೇಮಕ ಮಾಡಬೇಕು. ಇದು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಲಿದೆ ಎಂದು ನಾನು ನಂಬುತ್ತೇನೆ' ಎಂದರು. ಸಭೆಯಲ್ಲಿ ಸದಾನಂದನ್‌ ಅವರೂ ಭಾಗಿಯಾಗಿದ್ದರು.

'ಚಿತ್ರರಂಗವನ್ನು ಬಿಟ್ಟು ಮಂತ್ರಿಯಾಗಬೇಕು ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ. ಸದಾನಂದನ್‌ ಅವರ 'ಸಂಸದ' ಕಚೇರಿಯು ಶೀಘ್ರವೇ 'ಸಚಿವರ ಕಚೇರಿ'ಯಾಗಿ ಬದಲಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದೂ ಗೋಪಿ ಹೇಳಿದರು.

ಸದಾನಂದನ್‌ ಅವರು 2016ರಲ್ಲಿ ಬಿಜೆಪಿ ಸೇರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries