HEALTH TIPS

ವಂಚಿಚೂರ್: ವಿಲಾಸಿ ಕಾರಿಗೆ ಮಗನ ಪಟ್ಟು; ಕಬ್ಬಿಣದ ಸರಳಿನಿಂದ ಅಪ್ಪನ ಪೆಟ್ಟು

ತಿರುವನಂತಪುರಂ: ವಿಲಾಸಿ ಕಾರಿಗೆ ಪಟ್ಟು ಹಿಡಿದ ಮಗನ ಹಠ ವಿಕೋಕ್ಕೆ ತಿರುಗಿದ ಪರಿಣಾಮ ಕಬ್ಬಿಣದ ಸರಳಿನಿಂದ ತಂದೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣ ಕೇರಳದ ವಂಚಿಯೂರ್‌ನಲ್ಲಿ ಗುರುವಾರ ನಡೆದಿದೆ.

ತಂದೆಯ ದಾಳಿಗೆ ಒಳಗಾದ 28 ವರ್ಷದ ಮಗನ ತಲೆಗೆ ಗಂಭೀರವಾಗಿ ಗಾಯವಾಗಿದೆ.

ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ತಂದೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತಂದೆಯು ಮಗನ ಬೇಡಿಕೆಯಂತೆ ಇತ್ತೀಚೆಗೆ ವಿಲಾಸಿ ಬೈಕ್‌ ಕೊಡಿಸಿದ್ದರು. ಆದರೆ ಅದರಿಂದಲೂ ತೃಪ್ತಿಯಾಗ ಯುವಕ, ವಿಲಾಸಿ ಕಾರಿಗೆ ಬೇಡಿಕೆ ಇಟ್ಟಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಗುರುವಾರ ತೀವ್ರ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ತಂದೆಯ ಮೇಲೆ ಮಗ ದಾಳಿ ಮಾಡಿದ್ದ. ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಕೈಗೆ ಸಿಕ್ಕ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ನಿರುದ್ಯೋಗಿಯಾಗಿದ್ದ. ಆದರೆ ಸದಾ ವಿಲಾಸಿ ವಸ್ತುಗಳಿಗೆ ಮನೆಯಲ್ಲಿ ಬೇಡಿಕೆ ಇಡುತ್ತಿದ್ದ. ಅದು ಸಿಗದಿದ್ದಾಗ ತಕ್ಷಣ ಕೋಪಗೊಳ್ಳುತ್ತಿದ್ದ ಎಂದು ಅವರ ಸಂಬಂಧಿಕರು ಹಾಗೂ ಅಕ್ಕಪಕ್ಕದವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

'ಮಗನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಮೊಬೈಲ್ ಸ್ವಿಚ್‌ ಆಫ್‌ ಆಗಿದೆ. ತಲೆಮರೆಸಿಕೊಂಡಿರುವ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries