ಮಧೂರು: ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ವತಿಯಿಂದ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ 123ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಸೋಮವಾರ ಜರಗಿತು.
ಗಾನ ವೈಭವ ಕಾರ್ಯಕ್ರಮವನ್ನು ಬಾಲಕೃಷ್ಣ ಆಚಾರ್ಯ ಪುತ್ತಿಗೆ, ದಿವಾಕರ ಕಾಸರಗೋಡು ನೆರವೇರಿಸಿದರು. ನೃತ್ಯ ವೈಭವದಲ್ಲಿ ಲಿಖಿತಾ ಭಂಡಾರಿ, ನಿಹಾರಿಕಾ ರೈ ಉಪ್ಪಿನಂಗಡಿ, ಗ್ರೀಷ್ಮ ಪುತ್ತೂರು, ಲೇಖನ್ ಗೌಡ, ತೀರ್ಥನ್, ಕೃತ್ವಿಕ್ ಮುಂತಾದವರು ಭಾಗವಹಿಸಿದ್ದರು. ಗಣ್ಯರಾದ ಜಗದೀಶ್ ಆಚಾರ್ಯ, ತಾರಾನಾಥ್ ಆಚಾರ್ಯ, ಪುಷ್ಪಾವತಿ, ಗೌರಿ,ಮನು ಕುಮಾರ್ ಪುತ್ತೂರು, ನಳಿನಿ ರೈ, ಶಿವನ ಗೌಡ,ಅಚ್ಯುತ್ ಭಟ್ ಉಪಸ್ಥಿತರಿದ್ದರು.




.jpg)
