ಕುಂಬಳೆ: ಇಲ್ಲಿಗೆ ಸಮೀಪದ ಅನಂತಪುರದ ಪ್ಲೈವುಡ್ ಕಾರ್ಖಾನೆಯೊಂದರ ಬಾಯ್ಲರ್ ಸ್ಪೋಟಗೊಂಡು ಓರ್ವ ಮೃತಪಟ್ಟು ಹಲವರು ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವುದು ಇಂದು ಸಂಜೆ(ಸೋಮವಾರ) ಸಂಭವಿಸಿದ್ದು, ಆತಂಕ ಮೂಡಿಸಿದೆ. ಸಂಜೆ 7.30ರ ಸುಮಾರಿಗೆ ಘಟನೆ ಸಂಭವಿಸಿದ್ದು, ಸ್ಪೋಟದ ಪರಿಣಾಮ ಸುಮಾರು 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಅಲುಗಾಡಿ ಭೂಕಂಪನದ ಅನುಭವವಾಗಿದೆ.
ಅನಂತಪುರ ಬಳಿಯ ಕಣ್ಣೂರು ಡೆಕ್ಕೂರ್ ಫ್ಲೈವುಡ್ ಕಾರ್ಖಾನೆಯ ಬಾಯ್ಲರ್ ಸ್ಪೋಟಗೊಂಡು ವ್ಯಾಪಕ ಬೆಂಕಿ ಹತ್ತಿಕೊಂಡಿತು. 300ರಷ್ಟು ಅನ್ಯರಾಜ್ಯ ಕಾರ್ಮಿಕರು ಆ ಸ್ಥಳದಲ್ಲಿದ್ದರೆಂದು ತಿಳಿದುಬಂದಿದೆ.
ಘಟನೆಯ ತಕ್ಷಣ ಕಾಸರಗೋಡು, ಉಪ್ಪಳ, ಕಾಞಂಗಾಡುಗಳಿಂದ 30 ರಷ್ಟು ಅಗ್ನಿಶಾಮಕ ದಳಗಳು, ಕಾಸರಗೋಡು, ಕುಂಬಳೆ, ಬದಿಯಡ್ಕ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಘಟನೆಯ ವಿಷಯ ತಿಳಿದ ತಕ್ಷಣ ನೂರಾರು ಜನರು ಆಗಮಿಸಿದ್ದು, ಪೋಲೀಸರು ಆ ಪ್ರದೇಶವನ್ನು ಸುತ್ತುವರಿದು ಜನರನ್ನು ನಿಯಂತ್ರಿಸಿರುವರು.
ಕಾರ್ಮಿಕರ ಬಗ್ಗೆ ಅಸ್ಪಷ್ಟತೆ:
ಕಾರ್ಖಾನೆಯಲ್ಲಿ ಒಟ್ಟು ಎಷ್ಟು ಮಂದಿ ಕಾರ್ಮಿಕರಿದ್ದರು ಎಂಬ ಬಗ್ಗೆ ಅಸ್ಪಷ್ಟತೆಗಳಿವೆ. 50 ಮಂದಿ ಮಾತ್ರ ಇದ್ದರೆಂದು ಹೇಳಲಾಗುತ್ತಿದ್ದರೂ, 400ಕ್ಕೂ ಹೆಚ್ಚು ಮಂದಿ ಇರುವರೆಂದು ಸ್ಥಳೀಯರು ತಿಳಿಸಿದ್ದಾರೆ.
ನಿಷೇಧಿತ ರೋಹಿಗ್ಯಾಂಮ್ ಗಳೇ(ಬಂಗಾಳಿಗಳೆಂದು ಕರೆಯಲ್ಪಡುವ) ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗಳಿದ್ದರೆಂದು ಹೇಳಲಾಗಿದೆ.




