HEALTH TIPS

ಮತದಾರರ ಚೀಟಿ ಹಂಚುತ್ತಿದ್ದ ಆರೋಪ: ಕಾಂಗ್ರೆಸ್‌ ನಾಯಕನ ವಿರುದ್ದ ಪ್ರಕರಣ ದಾಖಲು‌

ಹೈದರಾಬಾದ್‌: ಕಾರ್ಯಕ್ರಮವೊಂದರಲ್ಲಿ ಅಕ್ರಮವಾಗಿ ಮತದಾರರ ಚೀಟಿ ಹಂಚುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ ನಾಯಕರೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇತ್ತೀಚೆಗೆ ಬುಬ್ಲಿ ಹಿಲ್‌ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ ನಾಯಕ ವಿ. ನವೀನ್‌ ಯಾದವ್‌ ಅವರು ಅಕ್ರಮವಾಗಿ ಮತದಾರರ ಚೀಟಿ ಹಂಚಿದ್ದರು ಎಂದು ಬಿಜೆಪಿ ಸಂಸದ ಎಂ. ರಘುನಂದನ್‌ ರಾವ್‌ ಅವರು ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದ್ದರು.

ಚುನಾವಣಾ ಆಯೋಗದ ಸೂಚನೆಯ ಪ್ರಕಾರ, ಚುನಾವಣಾ ಅಧಿಕಾರಿ ಮತ್ತು ಸ್ಥಳೀಯ ಆಡಳಿತದ ನೇರ ಮೇಲ್ವಿಚಾರಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಗೆ ಮಾತ್ರ ಮತದಾರರ ಚೀಟಿ ಹಂಚುವ ಅಧಿಕಾರವಿದೆ. ಅಕ್ರಮವಾಗಿ ಮತದಾರರ ಚೀಟಿ ಹಂಚಿದವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಎಂ. ರಘುನಂದನ್‌ ರಾವ್‌ ಆರೋಪಿಸಿದ್ದರು.

ನವೆಂಬರ್‌ 11 ರಂದು ಬುಬ್ಲಿ ಹಿಲ್‌ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಜರುಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries