HEALTH TIPS

ಪಿಎಂ ಶ್ರೀ ಯೋಜನೆ; ಆರ್.ಎಸ್.ಎಸ್.ನ ವಿಭಜಕ ರಾಜಕೀಯವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ: ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿಗೆ ಬಹಿರಂಗ ಪತ್ರ ಬರೆದ ಎಐಎಸ್‍ಎಫ್

ತಿರುವನಂತಪುರಂ: ಎಐಎಸ್‍ಎಫ್ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿಗೆ ಬಹಿರಂಗ ಪತ್ರ ಬರೆದಿದೆ. ಪಿಎಂ ಶ್ರೀ ಯೋಜನೆಯ ಭಾಗವಾಗಬಾರದು ಎಂಬುದು ಎಐಎಸ್‍ಎಫ್‍ನ ನಿಲುವು ವ್ಯಕ್ತಪಡಿಸಿದೆ.

ಪತ್ರದಲ್ಲಿ, ಪಿಎಂ ಶ್ರೀಯು  ಆರ್‍ಎಸ್‍ಎಸ್‍ನ ವಿಭಜಕ ರಾಜಕೀಯವನ್ನು ಜಾರಿಗೆ ತರುವ ಯೋಜನೆಯಾಗಿದ್ದು, ಇದನ್ನು ಎಐಎಸ್‍ಎಫ್ ಟೀಕಿಸಿದೆ ಮತ್ತು ಕೇಂದ್ರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಡ್ಡ ದಾರಿಗಳ ಮೂಲಕ ಹೇರಲು ಪ್ರಯತ್ನಿಸುತ್ತಿದೆ ಎಂದದು ಆರೋಪಿಸಿದೆ. ಕೇಂದ್ರದ ನಡೆ ರಾಜ್ಯದ ಅಧಿಕಾರವನ್ನು ಕಸಿದುಕೊಳ್ಳುವುದಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. 


ಇದಕ್ಕೂ ಮೊದಲು, ಸಿಪಿಐ ಇದರ ವಿರುದ್ಧ ಅಭಿಪ್ರಾಯ ತಿಳಿಸಿತ್ತು. ನಂತರ, ಸಿಪಿಐನ ವಿದ್ಯಾರ್ಥಿ ವಿಭಾಗವಾದ ಎಐಎಸ್‍ಎಫ್ ಕೂಡ ಇದೀಗ ಟೀಕೆ ಎತ್ತಿದೆ. ಪಿಎಂ ಶ್ರೀ ಯೋಜನೆಯು ಕಾಲಕ್ರಮೇಣ ಪಡೆದುಕೊಂಡಿರುವ ಕೇರಳದ ಶೈಕ್ಷಣಿಕ ಸಂಸ್ಕøತಿಯಲ್ಲಿ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರ ಮಾಡಿದ ಪ್ರಯತ್ನವಾಗಿದೆ ಎಂದು ಎಐಎಸ್‍ಎಫ್ ವಾದಿಸುತ್ತದೆ.

ಏತನ್ಮಧ್ಯೆ, ಡಿವೈಎಫ್‍ಐ ಪಿಎಂ ಶ್ರೀಯನ್ನು ಬೆಂಬಲಿಸುತ್ತಿದೆ. ಡಿವೈಎಫ್‍ಐ ರಾಜ್ಯ ಅಧ್ಯಕ್ಷ ವಿ. ವಾಸಿಫ್ ಮಾತನಾಡಿ, ಇದು ವಿದ್ಯಾರ್ಥಿಗಳಿಗೆ ಕೇಂದ್ರ ನೆರವು ಪಡೆಯುವ ಯೋಜನೆಯಾಗಿದ್ದು, ಅವರು ಪ್ರಯೋಜನವನ್ನು ಕಳೆದುಕೊಳ್ಳುವ ಯಾವುದೇ ಪರಿಸ್ಥಿತಿ ಇರಬಾರದು. ಈ ವಿಷಯದ ಬಗ್ಗೆ ಸಿಪಿಐನ ವಿರೋಧದ ಬಗ್ಗೆ ತಮಗೆ ತಿಳಿದಿಲ್ಲ ಎಂದು ವಾಸಿಫ್ ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಡಿವೈಎಫ್‍ಐನ ನಿಲುವು ಬದಲಾಗದೆ ಉಳಿದಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries