HEALTH TIPS

ರಾಮ ಮಂತ್ರ ಕೃಷ್ಣ ತಂತ್ರದಿಂದ ಚುನಾವಣೆಯನ್ನು ಎದುರಿಸಿ - ಸಿ.ಕೆ.ಪದ್ಮನಾಭನ್-ವಿಕಸಿತ ಕುಂಬ್ಡಾಜೆ ಸಂಕಲ್ಪದೊಂದಿಗೆ ಕಾರ್ಯಕರ್ತರ ಸಮಾವೇಶ, ಜನಪ್ರತಿನಿಧಿಗಳಿಗೆ ಅಭಿನಂದನೆ

ಬದಿಯಡ್ಕ: ವಿಕಸಿತ ಕುಂಬ್ಡಾಜೆ ಸಂಕಲ್ಪದೊಂದಿಗೆ ಕುಂಬ್ಡಾಜೆ ಬಿಜೆಪಿ ಕಾರ್ಯಕರ್ತರ ಸಮಾವೇಶ ಅಗಲ್ಪಾಡಿ ಮಾರ್ಪನಡ್ಕ ಶ್ರೀ ಪಾಂಚಜನ್ಯ ಸಭಾ ಭವನದಲ್ಲಿ ಭಾನುವಾರ ಜರಗಿತು. ಬಿಜೆಪಿ ನಿಕಟಪೂರ್ವ ಕೇರಳ ರಾಜ್ಯಾಧ್ಯಕ್ಷ ಸಿ.ಕೆ.ಪದ್ಮನಾಭನ್ ದೀಪಬೆಳಗಿಸಿ ಉದ್ಘಾಟಿಸಿದರು. ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪಿಣರಾಯಿ ನೇತೃತ್ವದ ಎಡರಂಗ ಸರ್ಕಾರ ಕೇರಳದ ಜನತೆಗೆ ದ್ರೋಹವನ್ನು ಬಗೆಯುತ್ತಾ ಬಂದಿದೆ. ಕೋಟಿ ಕೋಟಿ ಭಕ್ತರ ನಂಬಿಕೆಯ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಿಯಿಂದಲೇ ಚಿನ್ನವನ್ನು ಎಗರಿಸಿದ ಸರ್ಕಾರ ನಾಡಿನ ಜನತೆಗೆ ಕೇಂದ್ರದ ಅನುದಾನವನ್ನು ನೀಡುವಲ್ಲಿಯೂ ದ್ರೋಹವೆಸಗಿದೆ. ಒಂದರ ಹಿಂದೆ ಒಂದು ಎಂಬಂತೆ ವರ್ಷವಿಡೀ ಸಾಲುಸಾಲಾಗಿ ಹಗರಣಗಳನ್ನು ಮಾಡಿ ಜನರ ದಿಕ್ಕನ್ನು ತಪ್ಪಿಸುತ್ತಿದೆ. ಒಂದನ್ನು ಮುಚ್ಚಿಕೊಳ್ಳಲು ಮತ್ತೊಂದು ಹಗರಣವನ್ನು ಮಾಡಿ ರಾಜ್ಯದ ಬೊಕ್ಕಸವನ್ನು ಲೂಟಿಮಾಡುತ್ತಾ ಮುಂದುವರಿದಿದೆ. ಕೇಂದ್ರ ಸರ್ಕಾರದ ರೈಲ್ವೇ, ಹೈವೇ ಯೋಜನೆಯ ಅಭಿವೃದ್ಧಿಯನ್ನು ಕೇರಳ ಸರ್ಕಾರದ ಯೋಜನೆಯೆಂಬುದಾಗಿ ಬಿಂಬಿಸುತ್ತಿದ್ದಾರೆ. ಕಾರ್ಯಕರ್ತರೇ ಭಾರತೀಯ ಜನತಾ ಪಕ್ಷದ ಬೆನ್ನೆಲುಬು. ಮುಂದಿನ ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಆಡಳಿತವು ಬಿಜೆಪಿ ಪಾಲಾಗಬೇಕಿದೆ. ವಿರೋಧಿಗಳ ಕುತಂತ್ರಕ್ಕೆ ಪ್ರತಿಯಾಗಿ ರಾಮ ಮಂತ್ರ ಕೃಷ್ಣ ತಂತ್ರವನ್ನು ಚಾಣಾಕ್ಷತನದಿಂದ ಪ್ರಯೋಗಿಸುವಲ್ಲಿ ನಾವು ಯಶಸ್ವಿಯಾಗಬೇಕು. ಇದಕ್ಕೆ ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಜೊತೆಗೂಡಿ ಮನೆ ಮನೆ ಸಂಪರ್ಕದಿಂದ ಮತದಾರರ ಮನವೊಲಿಸಿ ಎಡ-ಐಕ್ಯ ರಂಗಗಳ ಆಡಳಿತಕ್ಕೆ ಕೊನೆಗಾಣಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಸನ್ಮಾನಿಸಿದರು. 

ಬಿಜೆಪಿ ಮಂಗಳೂರು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮುಖ್ಯ ಅತಿಥಿಗಳಾಗಿ ಮಾತನಾಡಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಬೇರೆಯಲ್ಲ. ಹಿಂದೂವಿರೋ ಧೋರಣೆಯ ಪಕ್ಷಗಳು ಅಧಿಕಾರದಲ್ಲಿದ್ದುಕೊಂಡು ಕೇರಳ ರಾಜ್ಯದಲ್ಲಿ ಅನ್ಯಾಯವನ್ನೆಸಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳದಲ್ಲಿ ಅನುಷ್ಠಾನಗೊಳಿಸದೆ ಬಡಜನತೆಗೆ ವಂಚಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ರಸ್ತೆ, ಮನೆ ಮನೆ ನೀರಿನ ಸಂಪರ್ಕವನ್ನು ತನ್ನ ಯೋಜನೆಯೆಂದು ಬಿಂಬಿಸಲು ಹೊರಟಿರುವುದು ತನ್ನ ಹೇಡಿತನವನ್ನು ತೋರಿಸಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಾತ್ರ ಕೇರಳದ ಬದುಕು ಸುರಕ್ಷಿತವಾಗಲಿದೆ. ನಾಡಿನ ಜನರು ಎಚ್ಚೆತ್ತುಕೊಂಡು ಮುಂದುವರಿಯಬೇಕು. ಆನೇಕ ಸವಾಲುಗಳನ್ನು ಎದುರಿಸಬೇಕಾದರೂ ಅದನ್ನೆಲ್ಲ ಪ್ರತಿಯೊಬ್ಬರೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕೆಲಸ ಮಾಡಬೇಕು. ಕೇಂದ್ರದ ಮೋದಿ ಸರ್ಕಾರದ ಆಡಳಿತ ಯೋಜನೆಯನ್ನು ತಳಮಟ್ಟಕ್ಕೆ ತಲುಪಿಸುವಲ್ಲಿ ಶ್ರಮಿಸಬೇಕೆಂದು ಅವರು ಕರೆನೀಡಿದರು.

ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್., ದೇಶೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ, ಬದಿಯಡ್ಕ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಕೋಝಿಕ್ಕೋಡು ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್., ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಪಾಲ್ಗೊಂಡಿದ್ದರು. ಕುಂಬ್ಡಾಜೆ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ ಸ್ವಾಗತಿಸಿ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಶರಣ್ಯ ಮೈಲ್ತೊಟ್ಟಿ ವಂದೇಮಾತರಂ ಹಾಡಿದರು. 


...

ಚುನಾಯಿತ ಜನಪ್ರತಿನಿಧಿಗಳಾದ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಶೈಲಜಾ ಭಟ್, ನಳಿನಿಕೃಷ್ಣ, ಯಶೋಧ ಎನ್., ಹರೀಶ್ ಗೋಸಾಡ, ಕೃಷ್ಣ ಶರ್ಮ, ಸುನಿತಾ ಜೆ ರೈ, ಮೀನಾಕ್ಷಿ ಎಸ್ ಹಾಗೂ ಸಿಡಿಎಸ್ ಚೇರ್‍ಪರ್ಸನ್ ರೋಶಿನಿ ಜನಾರ್ದನ್ ಅವರನ್ನು ಸಿ.ಕೆ.ಪದ್ಮನಾಭನ್ ಅವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries