ಬದಿಯಡ್ಕ: ಸುನಾದ ಸಂಗೀತ ಕಲಾಶಾಲೆ ಭಾರತೀ ನಗರ ಬದಿಯಡ್ಕ ಇವರ ಸುನಾದ ಸಂಗೀತೋತ್ಸವ 2025 ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆರಂಭವಾಯಿತು. ನಿವೃತ್ತ ಅಧ್ಯಾಪಕ ಶ್ಯಾಮ ಭಟ್ ವಳಕ್ಕುಂಜ ಹಾಗೂ ಜಯಕುಮಾರಿ ದಂಪತಿಗಳು ದೀಪಬೆಳಗಿಸಿ ಉದ್ಘಾಟಿಸಿದರು. ಶ್ಯಾಮಪ್ರಸಾದ ಕಬೆಕ್ಕೋಡು, ಸಂಗೀತ ಗುರುಗಳಾದ ವಿದುಷಿ ವಾಣಿಪ್ರಸಾದ್ ಕಬೆಕ್ಕೋಡು, ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸಂಗೀತ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಜೊತೆಗೂಡಿ ಗುರುವಂದನೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ಸಂಜೆ ಪ್ರಸಿದ್ಧ ಕಲಾವಿದರಾದ ವಿದ್ವಾನ್ ವಿವೇಕ್ ಸದಾಶಿವಮ್ ಅವರಿಂದ ಪ್ರಧಾನ ಕಛೇರಿ ನಡೆಯಿತು. ವಯಲಿನ್ನಲ್ಲಿ ವಿದ್ವಾನ್ ಟ್ರಿವೇಂಡ್ರಂ ಎನ್.ಸಂಪತ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ.ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರು ಜೊತೆಗೂಡಿದರು.




.jpg)
