ಬದಿಯಡ್ಕ: ಶ್ರೀ ಅಯ್ಯಪ್ಪ ಭಜನಾ ಮಂದಿರ ಮಜಿರ್ಪಳ್ಳಕಟ್ಟೆ, ಶಾಸ್ತಾನಗರ ನೀರ್ಚಾಲು ಇದರ ವಾರ್ಷಿಕ ಭಜನಾ ಸಂಕೀರ್ತನೆ ಡಿ. 20 ರಂದು ಜರಗಲಿದೆ. ಇದರ ಪೂರ್ವಭಾವಿಯಾಗಿ ತಿಂಗಳ ಮಹಾಸಭೆ ಮಂದಿರ ಪರಿಸರದಲ್ಲಿ ಭಾನುವಾರ ಜರಗಿತು. ಸಮಿತಿಯ ಅಧ್ಯಕ್ಷ ನವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಮಂದಿರದ ಗುರುಸ್ವಾಮಿ ರವಿ ಮಣಿಯಂಪಾರೆ ಮಾರ್ಗದರ್ಶನ ನೀಡಿದರು. ಹಿರಿಯ ಸದಸ್ಯರುಗಳಾದ ಸೂರ್ಯ ನಿಡುಗಳ, ಐತ್ತಪ್ಪ ಕುಲಾಲ್, ಸೀತಾರಾಮ, ಶೇಖರ, ರಾಘವ, ಸುಧಾಕರ ಮಜಿರ್ಪಳ್ಳಕಟ್ಟೆ, ಲೋಕೇಶ್ ಮುಂಡಾನ್ತ್ತಡ್ಕ ಮೊದಲಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಭಜನಾ ಸಂಕೀರ್ತನೆಯ ಆಮಂತ್ರಣ ಪತ್ರವನ್ನು ಗುರುಸ್ವಾಮಿ ರವಿ ಮೆಣಸಿನಪಾರೆ ಅವರು ಹಿರಿಯ ಸದಸ್ಯ ಐತ್ತಪ್ಪ ಕುಲಾಲ್ ಅವರಿಗೆ ನೀಡಿ ಉದ್ಘಾಟಿಸಿದರು. ಹರೀಶ್ ಮುಗುರೋಡು ಅವರಿಗೆ ಮಂದಿರದ ನೂತನ ಸದಸ್ಯತ್ವವನ್ನು ಹಿರಿಯ ಸದಸ್ಯ ಸೂರ್ಯ ನಿಡುಗಳ ನೀಡಿದರು. ಸಮಿತಿಯ ಕಾರ್ಯದರ್ಶಿ ಗಣೇಶ್ ಪಿ. ಎಂ ಮುಂಡಾನ್ತ್ತಡ್ಕ ಸ್ವಾಗತಿಸಿ, ರಾಜೇಶ್ ಎ. ಪೆರಿಯಡ್ಕ ವಂದಿಸಿದರು. ಭಜನಾ ಸಂಕೀರ್ತನೆ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.




.jpg)
