'ಎಷ್ಟೇ ಬಡಿದರೂ ಬಾಗಿಲು ತೆರೆಯುತ್ತಿಲ್ಲ ಎಂದು ಮನೆಗೆಲಸದವರು ರೋಹಿಣಿ ಅವರ ಕುಟುಂಬದವರಿಗೆ ನ.22ರಂದು ತಿಳಿಸಿದರು. ಪಕ್ಕದ ನಗರದಲ್ಲಿ ನೆಲೆಸಿದ್ದ ಕುಟುಂಬದವರೊಬ್ಬರು ಬಾಗಿಲು ಮುರಿದು ಒಳಹೋಗಿ ನೋಡಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ' ಎಂದು ಪೊಲೀಸರು ಮಾಹಿತಿ ನೀಡಿದರು.
'ರೋಹಿಣಿ ಅವರು ಹೇಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ತಿಳಿಯಲಿದೆ. ಅವರ ಮನೆಯಲ್ಲಿ ಮರಣ ಪತ್ರ ದೊರೆತಿದೆ. ವೀಸಾ ತಿರಸ್ಕೃತವಾಗಿದ್ದರಿಂದ ಖಿನ್ನತೆಗೆ ಒಳಪಟಿದ್ದರ ಕುರಿತು ಪತ್ರದಲ್ಲಿ ಬರೆಯಲಾಗಿದೆ' ಎಂದರು.




