HEALTH TIPS

ಜಿ.ಪಂ. ಕಣಕ್ಕೆ ಸಲ್ಲಿಸಿದ್ದ ಇಬ್ಬರ ನಾಮಪತ್ರಗಳು ತಿರಸ್ಕೃತ- ಸೂಕ್ಷ್ಮ ಪರಿಶೀಲನೆಯಲ್ಲಿ ಹೊರಕ್ಕೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಲು ಸಲ್ಲಿಸಿದ್ದ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ.
ಬದಿಯಡ್ಕ ಡಿವಿಜನ್ ನಿಂದ ಸಲ್ಲಿಸಲ್ಪಟ್ಟ ಕೆ. ಬಿಜು ಹಾಗೂ ಮಂಜೇಶ್ವರ ಡಿವಿಜನ್ ನಿಂದ ಸಲ್ಲಿಸಲ್ಪಟ್ಟ ಬುರ್ಷಾ ಎಂಬವರ ನಾಮಪತ್ರಗಳು ನಿನ್ನೆ  ನಡೆದ ಸೂಕ್ಷ್ಮ ತಪಾಸಣೆಯಲ್ಲಿ ತಿರಸ್ಕೃತಗೊಂಡಿದೆ.
ನಾಮಪತ್ರಿಕೆ ಜತೆ ಸಮರ್ಪಿಸಲ್ಪಟ್ಟ ಪ. ಜಾತಿ ಸರ್ಟಿಫಿಕೇಟ್ ಕಾಲಾವಧಿ ಮುಗಿದಿದ್ದರಿಂದ ಕೆ. ಬಿಜು ನಾಮಪತ್ರ ಅಸಿಂಧುಗೊಂಡಿತು. ಇದೇ ವೇಳೆ ನಾಮಪತ್ರಿಕೆಯಲ್ಲಿ ಸಹಿ ಹಾಕದೇ ಇದ್ದು, ಪ್ರತಿಜ್ಞೆ ಸಲ್ಲಿಸದೇ ಇದ್ದ ಕಾರಣ ಬುರ್ಷಾ ನಾಮಪತ್ರಿಕೆ ತಿರಸ್ಕೃತವಾಯಿತು.
ಉಳಿದಂತೆ ಜಿಲ್ಲಾ ಪಂಚಾಯತಿನ 113ನಾಮ ಪತ್ರಗಳು ಸ್ವೀಕೃತಗೊಂಡಿದೆ. 24ರಂದು ನಾಮಪತ್ರ ಹಿಂತೆಗೆಯಲು ಅಂತಿಮದಿನವಾಗಿದೆ. ಜಿಲ್ಲಾಧಿಕಾರಿ ಕೆ. ಇಂಬುಶೇಖರ್ ಮೇಲ್ನೋಟದಲ್ಲಿ ನಾಮಪತ್ರಿಕೆಗಳ ಸೂಕ್ಷ್ಮ ತಪಾಸಣೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries