ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹಾಗೂ ಇಒ ಸ್ವಾಗತಿಸಿ ಬರಮಾಡಿಕೊಂಡರು

ಧ್ವಜಸ್ತಂಭದ ಮೂಲಕ ದೇವಾಲಯಕ್ಕೆ ಪ್ರವೇಶಿಸಿದ ರಾಷ್ಟ್ರಪತಿ ಮುರ್ಮು ಅವರು ಬಾಲಾಜಿ ದರ್ಶನ ಪಡೆದರು. ನಂತರ ಅವರನ್ನು ಆಡಳಿತ ಸಮಿತಿ ಸನ್ಮಾನಿಸಿತು.
ತಿರುಪತಿ ಜಿಲ್ಲೆಯ ತಿರುಚನೂರಿಗೆ ಗುರುವಾರ ಭೇಟಿ ನೀಡಿದ ರಾಷ್ಟ್ರಪತಿ ಅವರು ಪದ್ಮಾವತಿ ಅಮ್ಮನವರ ದರ್ಶನ ಪಡೆದರು. ಅವರಿಗೆ ಅಲ್ಲಿ ಶೇಷವಸ್ತ್ರ ನೀಡಿ ಗೌರವಿಸಲಾಯಿತು.




