HEALTH TIPS

ಕೋವಿಡ್‌ ಲಸಿಕೆ ಪ್ರಕರಣ: ಗಂಭೀರ್ ಮೇಲಿನ ಪ್ರಕರಣ ರದ್ದು ಪಡಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಮೇಲಿನ ಕೋವಿಡ್‌ ಲಸಿಕೆಯ ಅಕ್ರಮ ಸಂಗ್ರಹ ಹಾಗೂ ವಿತರಣೆಯ ಕ್ರಿಮಿನಲ್‌ ಪ್ರಕರಣವನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ರದ್ದುಪಡಿಸಿದೆ.

ಕೋವಿಡ್‌ ಸಮಯದಲ್ಲಿ ಅಕ್ರಮ ಜರುಗಿದೆ ಎಂದು ಗೌತಮ್‌ ಗಂಭೀರ್‌, ಅವರ ಹೆಂಡತಿ, ತಾಯಿ ಹಾಗೂ ಫೌಂಡೇಶನ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.

ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಗಂಭೀರ್‌ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಗೌತಮ್‌ ಗಂಭೀರ್‌ ಮೇಲಿನ ಕ್ರಿಮಿನಲ್‌ ಆರೋಪವನ್ನು ರದ್ದು ಮಾಡಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ತೀರ್ಪು ನೀಡಿದ್ದಾರೆ.

ಗಂಭೀರ್‌ ಅವರು ಸಂಸದರಾಗಿದ್ದ ಸಮಯದಲ್ಲಿ ಅವರ ಫೌಂಡೇಶನ್‌ ಅಕ್ರಮವಾಗಿ ಕೋವಿಡ್‌ ಲಸಿಕೆ ಸಂಗ್ರಹಿಸಿದೆ, ಪರವಾನಗಿ ಇಲ್ಲದೇ ಅದನ್ನು ವಿತರಣೆ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿ ಸರ್ಕಾರದ ಔಷಧ ನಿಯಂತ್ರಣ ಮಂಡಳಿಯು ಅವರ ವಿರುದ್ದ ಪ್ರಕರಣ ದಾಖಲಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries