ಬದಿಯಡ್ಕ: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಮುಳ್ಳೇರಿಯ ಮಂಡಲದ ಪೆರಡಾಲ ವಲಯದ ಕುಮಾರಮಂಗಲ ಸಮೀಪದ ಧನ್ವಂತರಿ ಶ್ರೀವನದಲ್ಲಿ ಶ್ರಮದಾನ - ಸೇವಾ ಅಘ್ರ್ಯ ನಡೆಯಿತು.
ಶ್ರಮದಾನ ಕಾರ್ಯದಲ್ಲಿ ಪರಿಸರವನ್ನು ಶುಚಿಗೊಳಿಸಿ ಪೂರ್ವಭಾಗದ ಗಡಿ ಭಾಗದಲ್ಲಿ ಕಲ್ಲುಗಳನ್ನುರಿಸಿ ಗಡಿ ಗುರುತಿಸಲಾಯಿತು. ಧನ್ವಂತರಿ ಶ್ರೀವನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ, ವೈದ್ಯ ವೈ.ವಿ. ಕೃಷ್ಣಮೂರ್ತಿ ಏತಡ್ಕ ನೇತೃತ್ವವಹಿಸಿದ್ದರು. ಮಂಡಲ ಶಿಷ್ಯಮಾಧ್ಯಮ ಪ್ರಧಾನ ಮಹೇಶ ಕೃಷ್ಣ ತೇಜಸ್ವಿ ಕುಳಮರ್ವ, ನೀರ್ಚಾಲು ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಶಿಮಲಡ್ಕ, ಕೋಶ ವಿಭಾಗದ ಮಹೇಶ ಸರಳಿ, ಗುರಿಕ್ಕಾರ ಗೋಪಾಲಕೃಷ್ಣ ಭಟ್ ಕುಂಜಾರು, ಗೋಪಾಲಕೃಷ್ಣ ಭಟ್ ಕುಳಮರ್ವ, ಧನೀಷ್ ಪಜಿಲ, ರಾಮಚಂದ್ರ ಭಟ್ ಮಧುರಕಾನನ, ಕಾರ್ಯಕರ್ತರು ಪಾಲ್ಗೊಂಡಿದ್ದರು. ಶ್ರಮದಾನದ ನಂತರ ನಡೆದ ಸಭೆಯಲ್ಲಿ ಮುಂದಿನ ಕಾರ್ಯಯೋಜನೆಗಳ ಕುರಿತು ಸಮಾಲೋಚಿಸಲಾಯಿತು. ಧನ್ವಂತರಿ ಶ್ರೀವನದ ಸಂಚಾಲಕ ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.




.jpg)
.jpg)
