ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಉಪ್ಪಳದ ಮಾಸ್ಟರ್ ಕಂಪ್ಯೂಟರ್ ಸಂಸ್ಥೆಯ ಕಲಿಕಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯನ್ನು ಸಂದರ್ಶಸಿ ತಾವು ತಯಾರಿಸಿದ ಕರಕುಶಲ ವಸ್ತುಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ನೀಡಿ ಖುಷಿ ಪಡಿಸಿದರು.
ಮಂಜೇಶ್ವರ ಬಿ.ಆರ್. ಸಿ.ಯ ಬಿ.ಪಿ.ಸಿ ಸುಮಾದೇವಿಯವರು ಉದ್ಘಾಟಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಮಾಸ್ಟರ್ ಕಂಪ್ಯೂಟರ್ ಸಂಸ್ಥೆಯ ನಿರ್ದೇಶಕ ಶಫೀಕ್ ಶುಭ ಹಾರೈಸಿ ಕಾಗದದಿಂದ ಮಾಡಿದ ವಸ್ತುಗಳನ್ನು ನೀಡುವುದರ ಮೂಲಕ ಮಕ್ಕಳ ಸಂತಸದಲ್ಲಿ ಭಾಗಿಯಾದರು. ಬಿ. ಆರ್.ಸಿ. ತರಬೇತುದಾರೆ ಸುಮಯ್ಯ, ಶಿಕ್ಷಕಿ ಆಯುಷತ್ ಸೈನಾಜ್, ಮಾಸ್ಟರ್ ಕಂಪ್ಯೂಟರ್ ಸಂಸ್ಥೆಯ ಶಿಕ್ಷಕಿಯರಾದ ಸುನೀತ, ಅನಿಶಾ, ಸುಜಾತ ಮತ್ತು ಶಾಲಾ ಎಂ.ಪಿ.ಟಿ.ಎ. ಉಪಾಧ್ಯಕ್ಷೆ ಫಾತಿಮತ್ ಝಹಿದ ಉಪಸ್ಥಿತರಿದ್ದು ಶುಭ ಹಾರೈಸಿದರು. ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು. ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಮಕ್ಕಳು ವಿವಿಧ ನೆಹರು ಟೋಪಿಯನ್ನು ನಿರ್ಮಿಸಿದರು. ಶಿಕ್ಷಕಿ ಅನುಕೃಷ್ಣ ಸ್ವಾಗತಿಸಿ, ಶಿಕ್ಷಕಿ ಐಶ್ವರ್ಯ ವಂದಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ನಿರ್ವಹಿಸಿದರು.




.jpg)
