ಮಂಜೇಶ್ವರ: ಉದ್ಯಾವರ ತೋಟ ಜಿ.ಎಮ್.ಎಲ್.ಪಿ ಶಾಲೆಯಲ್ಲಿ ಆಸ್ಟರ್ ವಿಮ್ಸ್ ಆಸ್ಪತ್ರೆ ಕಾಸರಗೋಡು ಇದರ ಪ್ರಾಯೋಜಕತ್ವದಲ್ಲಿ ಉಚಿತ ಕಣ್ಣಿನ ಪರೀಕ್ಷೆ ಶಾಲಾ ಮಕ್ಕಳಿಗೆ ನಡೆಯಿತು. ಶಾಲೆಯಲ್ಲಿ ಕಲಿಯುವ ಒಂದನೇ ತರಗತಿಯಿಂದ ನಾಲ್ಕನೆ ತರಗತಿವರೆಗಿನ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಲಾಯಿತು. ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಕಾರ್ಯಕ್ರಮ ಉದ್ಘಾಟಿಸಿದರು. ಆಸ್ಟರ್ ನಿಮ್ಸ್ ಆಸ್ಪತ್ರೆಯ ಕಣ್ಣಿನ ವೈದ್ಯ ಲುಬ, ಕೋರ್ಡಿನೇಟರ್ಗಳಾದ ಗೋಪಿಕ ಹಾಗೂ ಜಸೀಲ್ ತಪಾಸಣೆ ನಡೆಸಿ ಮಕ್ಕಳಿಗೆ ಸಲಹೆ ಸೂಚನೆ ನೀಡಿದರು. ಅಧ್ಯಾಪಕರಾದ ಅಭಿಲಾಷ್ ರಾವ್, ಮುಫೀದ, ರೇಖ, ಮುಮ್ತಾಜ್ ಸಹಕರಿಸಿದರು. ಅಭಿಲಾಷ್ ರಾವ್ ಸ್ವಾಗತಿಸಿ, ಮುಫೀದ ವಂದಿಸಿದರು.




.jpg)
.jpg)
