HEALTH TIPS

ಕಾಸರಗೋಡಿನಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜನ್ಮ ದಿನಾಚರಣೆ, ಶ್ರೀಸತ್ಯನಾರಾಯಣ ಪೂಜೆ

ಕಾಸರಗೋಡು: ನಗರದ ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಬೆಳಗ್ಗೆ ಧ್ವಜಾರೋಹಣದೊಂದಿದಗೆ ಕಾರ್ಯಕ್ರಮ ಆರಂಭಗೊಮಡಿತು.ಅಭಯನಿಕೇತನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣಪತಿ ಹೋಮ, ಓಂಕಾರ, ಸುಪ್ರಭಾತಂ,  ನಾಗರ ಸಂಗೀತ, ಗಣಪತಿ ಹೋಮ,  ಶ್ರೀ ಸಾಯಿ ಸಹಸ್ರ ನಾಮಾರ್ಚನೆ, ಶ್ರೀ ಸತ್ಯನಾರಾಯಣ ಪೂಜೆ, ನಾರಾಯಣ ಸೇವೆ ಜರುಗಿತು. 

ಅಭಯನಿಕೇತನ ಕಾರ್ಯಕರ್ತರಿಂದ ಭಜನೆ, ಲಲಿತಾ ಸಹಸ್ರ ನಾಮ ಪಠಣ ಜರುಗಿತು. ಅಭಯನಿಕೇತನದ ಸಾಮಾಜಿಕ ಸೇವಾಕಾರ್ಯಗಳ ಅಂಗವಾಗಿ ಅಸೌಖ್ಯಪೀಡಿತರಿಗೆ ಗಾಲಿಕುರ್ಚಿಗಳ ವಿತರಣೆ, ಉಯ್ಯಾಲೆ ಉತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries