ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವಂಬರ್ 24ರಿಂದ 28ರ ವರೆಗೆ ನಡೆಯಲಿರುವ "ಷಷ್ಠೀ ಮಹೋತ್ಸವ"ದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ದಿನೇಶಕೃಷ್ಣ ತಂತ್ರಿಗಳು ಬಿಡುಗಡೆ ಮಾಡಿದರು.
ಪ್ರಧಾನ ಅರ್ಚಕ ಶ್ರೀ ವಾಸುದೇವ ಮಯ್ಯ, ಆಡಳಿತ ಮೊಕ್ತೇಸರ ಸುಭಾಸ್ ಚಂದ್ರ ಅಡಪ, ಗೌರವಾಧ್ಯಕ್ಷ ದುರ್ಗಾದಾಸ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಪಾವಳ, ಮೊಕ್ತೇಸರ ಶ್ಯಾಮ್ ವಿಠ್ಠಲ ಕೋಡಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ರೈ ಕಲ್ಪನೆ ಮೊದಲಾದವರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ನವೆಂಬರ್ 19ರಂದು ಅಮಾವಾಸ್ಯೆ ರಂಗಪೂಜೆ, ನ. 24ರಂದು ಧ್ವಜಾರೋಹಣ, 25ರಂದು ಪಂಚಮಿ ಉತ್ಸವ, 26ರಂದು ತುಲಾಭಾರ, ಷಷ್ಠೀ ಮಹೋತ್ಸವ, ರಾತ್ರಿ ಬಲಿ ಉತ್ಸವ, 27ರಂದು ಸಪ್ತಮೀ ಉತ್ಸವ, ಶಯನ, 28ರಂದು ಅವಭೃತ ಮತ್ತು ಧ್ವಜಾರೋಹಣ ನಡೆಯಲಿದೆ.





