HEALTH TIPS

ಬಿಎಲ್‍ಓ ಆತ್ಮಹತ್ಯೆ ಪ್ರಕರಣ-ಎನ್‍ಜಿಓ ಅಸೋಸಿಯೇಶನ್‍ನಿಮದ ಪ್ರತಿಭಟನಾ ಮೆರವಣಿಗೆ

ಕಾಸರಗೋಡು: ಪಯ್ಯನ್ನೂರು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಓ) ಅನೀಶ್ ಜಾರ್ಜ್ ಎಂಬವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕೇರಳ ಎನ್‍ಜಿಒ ಅಸೋಸಿಯೇಷನ್ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿಪ್ರತಿಭಟನಾ ಮೆರವಣಿಗೆ ನಡೆಯಿತು. 

ಆಮೂಲಾಗ್ರ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಇದರಿಂದ ಆತ್ಮಹತ್ಯೆಗೆ ಮುಂದಾಗುವಂತಾಘಿದೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಒಂದು ತಿಂಗಳಿಗೂ ಕಡಿಮೆ ಅವಧಿಯಿರುವಾಗ ಎಸ್‍ಐಆರ್ ನಡೆಸಲು ಚುನವಣಾ ಆಯೋಗ ತೀರ್ಮಾನಿಸಿರುವುದು ನೌಕರರಿಗೆ ಕೆಲಸದ ಒತ್ತಡ ಹೆಚ್ಚುವಂತಾಗಿದೆ. ಆತ್ಮಹತ್ಯಾ ಪ್ರಕರಣ ಮರುಕಳಿಸದಿರುವಂತಾಗಲು ಎಸ್‍ಐಆರ್ ಪ್ರಕ್ರಿಯೆ ತಕ್ಷಣ ನಿಲುಗಡೆಗೊಳಿಸುವಂತೆ ಧರಣಿ ಉದ್ಘಾಟಿಸಿದ ಕೇರಳ ಎನ್‍ಜಿಒ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎ.ಟಿ. ಶಶಿ ಒತ್ತಾಯಿಸಿದ್ದಾರೆ.

ಸಂಘಟನೆ ರಾಜ್ಯ ಸಮಿತಿ ಸದಸ್ಯ ವಿಟಿಪಿ ರಾಜೇಶ್  ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿಯ ಸದಸ್ಯ ಸುರೇಶ್ ಪೆರಿಯಂಗನಂ, ರಾಜ್ಯ ಸಮಿತಿ ಸದಸ್ಯ ಎಂ ಟಿ ಪ್ರಸೀದಾ, 

ಕೆ ಜಿ ರಾಧಾಕೃಷ್ಣನ್,  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಪಿ ಕುಞÂಕೃಷ್ಣನ್,  ಜಿಲ್ಲಾ ಖಜಾಂಚಿ ವಿ ಎಂ ರಾಜೇಶ್, ಕೆ ಮುರಳೀಧರನ್ ನಾಯರ್, ಶ್ರೀನಿಮೋನ್ ಕಾಞಂಗಾಡ್, ಬಾಬುರಾಜನ್ ತೈಕಡಪ್ಪುರ, ಜಯರಾಜ್ ಪೆರಿಯ, ರತೀಶ್ ಬಂದಡ್ಕ, ರತಿ ವಯಲಾಪ್ರಂ, ಗಿರಿಜಾ ಮಪ್ಪಿಡಿಚ್ಚೇರಿ ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries