HEALTH TIPS

ನಾಳೆ ಕಾಸರಗೋಡಿನಲ್ಲಿ'ಕೋಲಾರ-ಕಾಸರಗೋಡು ಗಡಿನಾಡು ಕನ್ನಡರಾಜ್ಯೋತ್ಸವ ಸಂಭ್ರಮ

ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡಭವನ ಮತ್ತು  ಗ್ರಂಥಾಲಯ ಹಾಗೂ ಕೋಲಾರದ ಬಿ.ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್‍ನ ಜಂಟಿ ಆಶ್ರಯದಲ್ಲಿ 'ಕೋಲಾರ-ಕಾಸರಗೋಡು ಗಡಿನಾಡು ಕನ್ನಡರಾಜ್ಯೋತ್ಸವ ಸಂಭ್ರಮ-2025ಕಾರ್ಯಕ್ರಮ ನ. 15ರಂದು ಬೆಳಗ್ಗೆ 10ರಿಂದ ಕನ್ನಡ ಭವನ  ಗ್ರಂಥಾಲಯದ ರಜತಸಂಭ್ರಮ ಸಭಾಂಗಣದಲ್ಲಿ ಜರುಗಲಿದೆ.

ಬೆಳಗ್ಗೆ 10ಕ್ಕೆ ಕನ್ನಡಭವನದ ಸಂಸ್ಥಾಪಕ ಡಾ. ವಾಮನ ರಾವ್‍ಬೇಕಲ್-ಸಂಧ್ಯಾರಾಣಿ ಟೀಚರ್ ಸಮಾರಂಭ ಉದ್ಘಾಟಿಸುವರು. ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್‍ನ ಬಿ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಕೋಲಾರ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ. ನಾರಾಯಣಪ್ಪ ಕನ್ನಡ ಧ್ವಜಾರೋಹಣ ನಡೆಸುವರು. ಕೋಲಾರದ ಬಿ. ವೆಂಕಟ್ರಾಮ ಕನ್ನಡ ಭುವನೇಶ್ವರೀ ಭಾವಚಿತ್ರಕ್ಕೆ ಹಾರಾರ್ಪಣೆ ನಡೆಸುವರು. ಡಾ.ಕೆ.ಎನ್ ವೆಂಕಟ್ರಮಣ ಹೊಳ್ಳ ಅವರು ನವೀಕೃತ ವೇದಿಕೆ ಲೋಕಾರ್ಪಣೆಗೈಯುವರು. ಕೋಲಾರದ ರಂಗ ಇಂಚರ ಟ್ರಸ್ಟ್ ಅಧ್ಯಕ್ಷ ಡಾ. ಇಂಚರ ನಾರಾಯಣ ಸ್ವಾಮಿ ಅವರು ಕನ್ನಡ ರಾಜ್ಯೋತ್ಸವ ಸಂದೇಶ ನೀಡುವರು

ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ಸಾಹಿತಿ, ಪ್ರಾಧ್ಯಾಪಕ ಡಾ. ಶರಣಪ್ಪ ಗಬ್ಬೂರ್, ಕೊಡಗು ಕನ್ನಡಭವನ ಅಧ್ಯಕ್ಷ ಬೊಳ್ಳಜಿರ ಬಿ.ಅಪ್ಪಯ್ಯ, ರುಬೀನಾ ಎಂ.ಎ, ಸಾಮಾಜಿಕ ಮುಖಂಡರಾದ ಗೋಪಾಲ ಶೆಟ್ಟಿ ಅರಬೈಲು, ಶ್ರೀಧರ ಶೆಟ್ಟಿ ಮುಟ್ಟಂ, ಕಾಸರಗೋಡಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ದಾಸ ಸಂಕೀರ್ತನಕಾರ ಜಯಾನಂದ ಕುಮಾರ ಹೊಸದುರ್ಗ, ಪ್ರಾಂಶುಪಾಲ ಕೆ ಪಿ ರಾಜೇಶ್ಚಂದ್ರ, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ, ಪತ್ರಕರ್ತ ಪ್ರದೀಪ್ ಬೇಕಲ್, ಸಾಹಿತಿ ವಿರಾಜ್ ಅಡೂರು, ಆಶ್ರಿತ್ ರೈ ಮಧೂರು ಭಾಗವಹಿಸುವರು. 

ಕಾರ್ಯಕ್ರಮದಲ್ಲಿ ವಿವಾಹ ರಜತ ಸಂಭ್ರಮದಲ್ಲಿರುವ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ-ರೂಪಕಲಾ ದಂಪತಿಯನ್ನು ಗೌರವಿಸಲಾಗುವುದು. ಈ ಸಂದರ್ಭ 25 ಮಂದಿ ಮುತೈದೆಯರಿಗೆ ಬಾಗಿನ ಸಮರ್ಪಣೆ ನಡೆಯಲಿದೆ. ಅಪರಾಹ್ನ 1ರಿಂದ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಚುಟುಕು ಕವಿಗೋಷ್ಠಿಯನ್ನು ಡಾ. ಶರಣಪ್ಪ ಗಬ್ಬೂರ್ ಉದ್ಘಾಟಿಸುವರು.ಸುಮಾರು 20 ಮಂದಿ ಕವಿಗಳು ಭಾಗವಹಿಸಲಿದ್ದಾರೆ. 

ಈ ಸಂದರ್ಭ ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕøತಿಕ ಕಲಾ ವೇದಿಕೆಯ ಸುಮಾರು 50 ಮಂದಿ ಕಲಾವಿದರಿಂದ ಸಾಂಸ್ಕೃತಿಕ ವೈಭವ ಹಾಗೂ ಕೀಕಾನ ವಿಷ್ಣುಪ್ರಿಯಾ ಮಹಿಳಾ ಸಂಘದ ಸದಸ್ಯರಿಂದ ನೃತ್ಯ ಸಂಭ್ರಮ ನಡೆಯುವುದು. ಸಂಜೆ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ 2025ನೇ ಸಾಲಿನ  ಸ್ವರ್ಣಭೂಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಭರವಸೆಯ ಬೆಳಕು ಪ್ರಶಸ್ತಿ, ಲೈಟ್ ಆಫ್ ಹೋಪ್ಸ್ ಅಚ್ಯುವ್ಮೆಂಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು.  ಖ್ಯಾತ ವಿಮರ್ಶಕ ಡಾ. ಬಿ ಜನಾರ್ದನ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಾಧ್ಯಾಪಕ ಜಯಾನಂದ ಪೆರಾಜೆ ಸಮಾರೋಪ ಭಾಷಣ ಮಾಡುವರು. ಡಾ. ರವೀಂದ್ರ ಜೆಪ್ಪು, ಗುರುಪ್ರಸಾದ್ ಕೋಟೆಕಣಿ, ಪ್ರಕಾಶ್ಚಂದ್ರ ಕಾಸರಗೋಡು ಉಪಸ್ಥಿತರಿರುವರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries