ನವದೆಹಲಿ: 'ವಂದೇ ಮಾತರಂ' ಗೀತೆಗೆ 150 ವರ್ಷ ತುಂಬುತ್ತಿರುವುದರಿಂದ ರಾಜ್ಯಸಭೆಯಲ್ಲಿ ಈ ಗೀತೆಯ ಕುರಿತು ಚರ್ಚಿಸಲು 10 ಗಂಟೆ ಮೀಸಲಿಡಲಾಗಿದೆ. ಈ ಚರ್ಚೆಯು ಮಂಗಳವಾರ (ಡಿ.9) ನಡೆಯಲಿದೆ.
ರಾಜ್ಯಸಭೆ ವ್ಯವಹಾರಗಳ ಸಲಹಾ ಸಮಿತಿಯು ಬುಧವಾರ ಸಭೆ ನಡೆಸಿತು. ಈ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಿ.10ರಂದು ಇದೇ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ.
'ವಂದೇ ಮಾತರಂ' ಗೀತೆಯ ಕುರಿತು ಚರ್ಚೆ ನಡೆದ ಬಳಿಕ ರಾಜ್ಯಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಚರ್ಚೆ ನಡೆಯಲಿದೆ.

