HEALTH TIPS

ಎಸ್‌ಐಆರ್ | ಕರ್ತವ್ಯ ಲೋಪ ಆರೋಪ: ಉತ್ತರ ಪ್ರದೇಶದ 28 ಬಿಎಲ್‌ಒಗಳ ವಿರುದ್ಧ ದೂರು

ಬಲ್ಲಿಯಾ: ಕರ್ತವ್ಯ ಲೋಪದ ಆರೋಪದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಗೆ (ಎಸ್‌ಐಆರ್) ಇಲ್ಲಿನ ಬೈರಿಯಾ ತೆಹಸಿಲ್‌ನಲ್ಲಿ ನಿಯೋಜನೆಗೊಂಡಿದ್ದ 28 ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ವಿರುದ್ಧ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಿದ್ದಾರೆ.

'ಎಸ್‌ಐಆರ್ ಪ್ರಕ್ರಿಯೆಯ ಪ್ರಗತಿ ಪರಿಶೀಲನೆಯನ್ನು ಶನಿವಾರ ನಡೆಸಲಾಯಿತು. ಈ ವೇಳೆ 28 ಬಿಎಲ್‌ಒಗಳು ಶೇ 25ಕ್ಕೂ ಕಡಿಮೆ ಕೆಲಸ ಪೂರೈಸಿರುವುದು ತಿಳಿದು ಬಂತು' ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಅಲೋಕ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ವಹಿಸಿದ ಕೆಲಸವನ್ನು ಕಡಿಮೆ ಪ್ರಮಾಣದಲ್ಲಿ ಮಾಡಿರುವುದು ಸಿಬ್ಬಂದಿಗಳ ಕಡೆಯಿಂದ ಉಂಟಾದ ಗಂಭೀರವಾದ ಕರ್ತವ್ಯ ಲೋಪ. ಈ ಬಗ್ಗೆ ಬೈರಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, 28 ಬಿಎಲ್‌ಒಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಲಾಗಿದೆ ಎಂದು ಅಲೋಕ್ ಹೇಳಿದ್ದಾರೆ.

ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಬೈರಿಯಾ ವೃತ್ತ ಅಧಿಕಾರಿ ಮೊಹಮ್ಮದ್ ಫಹೀಮ್ ಖುರೇಶಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries