HEALTH TIPS

'ಬಾಂಬೆ' ಚಿತ್ರ ಸಿನಿಮಾ-ಪ್ರವಾಸೋದ್ಯಮದ ಸಾಮಥ್ರ್ಯಕ್ಕೆ ಹೊಸ ಆಯಾಮ ತಂದುಕೊಟ್ಟಿದೆ: ಚಿತ್ರ ತಂಡದ ಅಭಿಪ್ರಾಯ

ಕಾಸರಗೋಡು: ಭಾರತೀಯ ಚಿತ್ರರಂಗದ ಪೌರಾಣಿಕ ಚಿತ್ರ 'ಬಾಂಬೆ' ಬಿಡುಗಡೆಯಾಗಿ 30 ವರ್ಷಗಳನ್ನು ಪೂರೈಸುತ್ತಿರುವ ಮಧ್ಯೆ, ಬಹುತೇಕ ಚಿತ್ರೀಕರಣ ನಡೆದಿರುವ ಕಾಸರಗೋಡಿನ ಬೇಕಲ ಕೋಟೆಗೆ ಆಗಮಿಸಿದ ಚಿತ್ರ ತಂಡ ಅಂದಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿತು. 


ಚತ್ರದ  ನಿರ್ದೇಶಕ ಮಣಿರತ್ನಂ, ನಾಯಕಿ ಮನಿಷಾ ಕೊಯಿರಾಲ ಮತ್ತು ಛಾಯಾಗ್ರಾಹಕ ರಾಜೀವ್ ಮೆನನ್ ಅವರನ್ನೊಳಚಗೊಂಡ ತಂಡ ಬೇಕಲ್ ಕೋಟೆಗೆ ಭೇಟಿನೀಡಿತ್ತು. ಚಿತ್ರದ ಪ್ರಸಿದ್ಧ'ಉ¬ರೆ'ಹಾಡಿನ ಚಿತ್ರೀಕರಣವನ್ನು ನಡೆಸಲಾದ ಬೇಕಲ ಕೋಟೆಯಲ್ಲಿನ ತಮ್ಮ ಚಲನಚಿತ್ರದ ಅನುಭವಗಳನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡರು.

ಆ ಸುಂದರ ತಾಣವನ್ನು ತಲುಪಿದ ಖುಷಿಯನ್ನು ಮನಿಷಾ ಕೊಯಿರಾಲ ಹಂಚಿಕೊಂಡರು. 'ಬಾಂಬೆ' ಚಿತ್ರ ಮತ್ತು ಹಾಡು ನನ್ನನ್ನು ಜನರ ಮನಸ್ಸಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಈ ಸುಂದರ ಸ್ಥಳಕ್ಕೆ ತಮ್ಮನ್ನು ಪರಿಚಯಿಸಿದ್ದಕ್ಕಾಗಿ ಛಾಯಾಗ್ರಾಹಕ ರಾಜೀವ್ ಮೆನನ್ ಅವರಿಗೆ ಋಣಿಯಾಗಿದ್ದೇನೆ. "30 ವರ್ಷಗಳಲ್ಲಿ, ಬೇಕಲ್ ಕೋಟೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ನಾನು ಗುರುತಿಸಲು ಸಾಧ್ಯವಾಗಿಲ್ಲ. ಇಲ್ಲಿಬಹಳಷ್ಟು ಬದಲಾವಣೆಯಾಗಿದೆ. ಆದರೆ ಇಲ್ಲಿನ ಹಳೆಯ ಭಾವನೆ ಮತ್ತು ಸಂತೋಷ ಸ್ವಲ್ಪವೂ ಬದಲಾಗಿಲ್ಲ ಎಂದು ತಿಳಿಸಿದ ಅವರು, ಕೇರಳದ ಈ ಸುಂದರ ತಾಣ ಚಲನಚಿತ್ರ ಚಿತ್ರೀಕರಣಕ್ಕೆ ಸೂಕ್ತ ಸ್ಥಳವಾಗಿದೆ ಎಂದು ತಿಳಿಸಿದರು.


ಉಯಿರೆ' ಹಾಡಿನ ಮೂಲಕ ಮರೆಯಲಾಗದ ಚಿತ್ರ 'ಬಾಂಬೆ' ಇನ್ನೂ ಜನರ ಮನ್ಸನಲ್ಲಿ ಜೀವಂತವಾಗಿದೆ ಎಂದು ಮಣಿರತ್ನಂ ಹೇಳಿದರು. "ಬೇಕಲದ ನೈಸರ್ಗಿಕ ಸೌಂದರ್ಯ, ಅದರ ಹವಾಮಾನ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತವು ಬಾಂಬೇ ಚಿತ್ರದ 'ಉಯಿರೇ...' ಹಾಡಿಗೆ ಮಾಂತ್ರಿಕ ಶಕ್ತಿಯನ್ನು ತಂದುಕೊಟ್ಟಿತ್ತು. ಆ ಹಾಡಿನ ಯಶಸ್ಸಿಗೆ ಶ್ರಮಿಸಿದ  ರೆಹಮಾನ್ ಅವರನ್ನು ಸಂತೋಷದಿಂದ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಚಿತ್ರೀಕರಣ 




ದ ಮಧುರ ನೆನಪುಗಳನ್ನು ಹಂಚಿಕೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries