HEALTH TIPS

ಮದುವೆಗೆ ಹೋಗಲು ವಿಧಾನಸಭೆಗೆ ಚಕ್ಕರ್: ಈ ಋತುವಿನಲ್ಲಿ ಕಲಾಪವೇ ಬೇಡ ಎಂದ ಸಚಿವ..!

 ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಗೆ ಆಡಳಿತ ಹಾಗೂ ವಿರೋಧ ಪಕ್ಷದ ಬಹುತೇಕ ಶಾಸಕರು ಶುಕ್ರವಾರ ಗೈರುಹಾಜರಾಗಿದ್ದಾರೆ.


ಕಲಾಪದ ಪ್ರಶ್ನೋತ್ತರಕ್ಕಾಗಿ ಶಾಸಕರ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿತ್ತು. ಈ ವೇಳೆ, ವಿಧಾನಸಭಾ ಸ್ಪೀಕರ್‌ ನರೇಂದ್ರ ಸಿಂಗ್‌ ತೋಮರ್‌ ಅವರು ಶಾಸಕರ ಹೆಸರನ್ನು ಕರೆದಾಗ, ಹಲವರು ಉತ್ತರಿಸಿಲ್ಲ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕಾಂಗ ವ್ಯವಹಾರ ಸಚಿವ ಕೈಲಾಸ್‌ ವಿಜಯವರ್ಗೀಯ ಅವರು 'ತಮ್ಮ ಮದುವೆ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಬೇಕು ಎಂದು ಜನರು ಬಯಸುತ್ತಾರೆ. ಮದುವೆ ಸೀಸನ್‌ ಇರುವುದರಿಂದ, ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಮದುವೆಗಳಲ್ಲಿ ಭಾಗಿಯಾಗಿದ್ದಾರೆ. ಅದರಿಂದ ಕಲಾಪಕ್ಕೆ ಗೈರುಹಾಜರಾಗಿದ್ದಾರೆ' ಎಂದು ಹೇಳಿದ್ದಾರೆ.

ಮುಂದಿನ ಬಾರಿಯಿಂದ ಮದುವೆ ಸೀಸನ್‌ ಗಮನದಲ್ಲಿಟ್ಟುಕೊಂಡು, ಕಲಾಪಗಳ ಸಮಯವನ್ನು ನಿಗದಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಶಾಸಕರಾದ ಕಮಲೇಶ್ವರ್, ಕುನ್ವರ್‌ ಸಿಂಗ್, ರಾಜೇಂದ್ರ ಬಾರ್ತಿ, ನರೇಂದ್ರ ಸಿಂಗ್, ದೀರೇಂದ್ರ ಸಿಂಗ್, ಸತೀಶ್ ಮಾಳ್ವಿಯಾ, ರಾಜೇಶ್‌ ಕುಮಾರ್ ಶುಕ್ಲಾ, ಮುಕೇಶ್ ಮಲ್ಹೋತ್ರಾ, ವಿರೇಂದ್ರ ಸಿಂಗ್ ಹಾಗೂ ಭೂಪೇಂದ್ರ ಸಿಂಗ್‌ ಸೇರಿದಂತೆ ಹಲವು ಶಾಸಕರು ಗೈರುಹಾಜರಾಗಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries