ಕೋಝಿಕೋಡ್: ವಡಗರ ಡಿವೈಎಸ್ಪಿ ಉಮೇಶ್ ಅವರನ್ನು ಕಸ್ಟಡಿಯಲ್ಲಿರುವ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಎಸ್ಪಿ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ಸಿಐ ಅವರ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾದ ಹೇಳಿಕೆಗಳನ್ನು ದೃಢಪಡಿಸಿದ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾದ ಯುವತಿ ನೀಡಿದ ಹೇಳಿಕೆಯೂ ಕ್ರಮಕ್ಕೆ ಕಾರಣವಾಯಿತು.
ಉಮೇಶ್ ಮೊನ್ನೆಯಿಂದಲೇ ರಜೆಯ ಮೇಲೆ ತೆರಳಿದ್ದರು. ಬದಲಿಗೆ ನಾದಾಪುರಂ ಕಂಟ್ರೋಲ್ ಡಿವೈಎಸ್ಪಿ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಉಮೇಶ್ ವಿರುದ್ಧದ ತನಿಖಾ ವರದಿಯಲ್ಲಿ ಅವರು ವಡಕ್ಕಂಚೇರಿಯ ಅI ಆಗಿದ್ದಾಗ, ಅನೈತಿಕ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಿದ್ದಾರೆ ಎಂದು ಕಂಡುಬಂದಿದೆ.
ಉಮೇಶ್ ಪೋಲೀಸ್ ಅಧಿಕಾರಿಯಾಗಿ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ತನಿಖಾ ವರದಿ ಸಲ್ಲಿಸಿದ ನಂತರ ಉಮೇಶ್ ರಜೆಯ ಮೇಲೆ ತೆರಳಿದ್ದಾರೆ. ಡಿವೈಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಕ್ಕಾಡ್ ಎಸ್ಪಿ ರಾಜ್ಯ ಪೆÇಲೀಸ್ ಮುಖ್ಯಸ್ಥರಿಗೆ ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಇಲಾಖಾ ಕ್ರಮ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಚೆರ್ಪುಲಸ್ಸೆರಿ ಸಿಐ ಬಿನು ಥಾಮಸ್ ತಮ್ಮ ಆತ್ಮಹತ್ಯಾ ಪತ್ರದಲ್ಲಿ ಡಿವೈಎಸ್ಪಿ ಅನೈತಿಕ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಯುವತಿಯನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಬರೆದಿದ್ದಾರೆ.
ಈ ಸಂಬಂಧ ಯುವತಿ ಮೊನ್ನೆ ಜಿಲ್ಲಾ ಅಪರಾಧ ವಿಭಾಗದ ಡಿವೈಎಸ್ಪಿಗೆ ಹೇಳಿಕೆ ನೀಡಿದ್ದರು. ಡಿವೈಎಸ್ಪಿ ಹಲವು ಬಾರಿ ಬೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿಯ ಹೇಳಿಕೆಯಲ್ಲಿ ಹೇಳಲಾಗಿದೆ. ಡಿವೈಎಸ್ಪಿ ತನ್ನೊಂದಿಗೆ ಬಂಧಿಸಲ್ಪಟ್ಟವರಿಂದಲೂ ಲಂಚ ಪಡೆದಿದ್ದಾರೆ ಎಂದು ಯುವತಿ ಹೇಳಿದ್ದಾಳೆ.




