ಉಪ್ಪಳ ; ಕೊಂಡೆವೂರು ಶ್ರೀ ನಿತ್ಯಾನಂದಯೋಗಾಶ್ರಮ ಮಠ ಮತ್ತು ಅಂಬೇಡ್ಕರ್ ಅಭಿಮಾನಿಗಳು ಮಂಗಲ್ಪಾಡಿ ಇವರ ಜಂಟಿ ಆಶ್ರಯದಲ್ಲಿ ಇಂದು(ಡಿ.17) ಸಂಜೆ 7.30 ರಿಂದ ಕೊಂಡೆವೂರಿನಲ್ಲಿ ಅಡ್ಡಂಡ ಕಾರ್ಯಪ್ಪ ಕೊಡಗು ಇವರು ರಚಿಸಿ ನಿರ್ದೇಶಿಸಿದ 'ನಿಜ ಮಹಾತ್ಮ ಬಾಬಾ ಸಾಹೇಬ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ವೈಚಾರಿಕ ತತ್ವ ಸಿದ್ಧಾಂತಗಳ ಸೃಷ್ಟ ಚಿತ್ರಣವನ್ನು ನೀಡಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಕಥೆಯನ್ನಾಧರಿಸಿದ ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಶುಕ್ರವಾರ ಎಡನೀರು ಮಠದಲ್ಲಿ:
ಇದೇ ನಾಟಕ ಡಿ.19 ರಂದು ಶುಕ್ರವಾರ ಸಂಜೆ 6.30ರಿಂದ ಎಡನೀರು ಮಠದ ಶ್ರೀಭಾರತೀ ಕಲಾಸದನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

