ಕಾಸರಗೋಡು: ಶ್ರೀ ಧರ್ಮಸ್ಥಳ ಕ್ಷೆತ್ರದ ಪಾವಿತ್ರ್ಯತೆ ಹಾಗೂ ಸಮಸ್ತ ಭಕ್ತರ ಶ್ರೇಯಸ್ಸು ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರಸಸ್ತಿ ಪುರಸ್ಕøತ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಉದಯಾಸ್ತಮಾನ ಭಜನಾ ಸಂಕೀರ್ತನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥನ ನಡೆಯಲ್ಲಿ ಸೋಮವಾರ ನಡೆಯಿತು. ವಿಶೇಷ ಪ್ರಾರ್ಥನೆಗೈದು ತೇಜಸ್ವಿ ಮನೋಹರ್ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಹಿಮ್ಮೆಳ ಹಾರ್ಮೋನಿಯಂನಲ್ಲಿ ಮೋಹನ ಆಚಾರ್ಯ ಪುಳ್ಕೂರು, ತಬಲದಲ್ಲಿ ಅಚ್ಚುತನಂದ ಆಚಾರ್ಯ ಕೂಡ್ಲು ಸಹಕರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಅಧ್ಯಕ್ಷ ಕೆ.ಗುರುಪ್ರಸಾದ್ ಕೋಟೆಕಣಿ, ಕೇರಳ ರಾಜ್ಯ ದಾಸಸಾಹಿತ್ಯ ಪರಿಷತ್ ಕಾಸರಗೋಡು ಅಧ್ಯಕ್ಷ ಶಿವರಾಮ ಕಾಸರಗೋಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

.jpg)
