HEALTH TIPS

ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮದ ಅಧ್ಯಕ್ಷ ಸತ್ಯೇಂದ್ರ ಸಿಂಗ್ ಕೇರಳ ಭೇಟಿಗೆ ಆಗಮನ

ತಿರುವನಂತಪುರ: ಏಳು ದಿನಗಳ ಕೇರಳ ಪ್ರವಾಸಕ್ಕಾಗಿ ತಿರುವನಂತಪುರಕ್ಕೆ ಆಗಮಿಸಿದ ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ ಅಧ್ಯಕ್ಷ ಸತ್ಯೇಂದ್ರ ಸಿಂಗ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಕೇರಳ ವನವಾಸಿ ವಿಕಾಸ ಕೇಂದ್ರದ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.

29ರವರೆಗೆ ಭೇಟಿ ನಡೆಯಲಿದೆ. ಇಂದು ತಿರುವನಂತಪುರದ ಅಗಸ್ತ್ಯ ಕುದಿರಂ ಬಾಲಿಕಾ ಸದನಂ ಬೆಳ್ಳಿ ಮಹೋತ್ಸವ ಸಮಾರಂಭ ಹಾಗೂ 28ರಂದು ಕೋಝಿಕ್ಕೋಡ್‍ನ ರಾಜ್ಯ ಕಛೇರಿ ಭಾಸ್ಕರ್ ರಾವ್ ಸೇವಾ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕೇರಳ ವನವಾಸಿ ವಿಕಾಸ ಕೇಂದ್ರದ ರಾಜ್ಯಾಧ್ಯಕ್ಷ ಎಂ.ಪಿ. ಜಯದೀಪ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶ್ರೀಕುಮಾರ್, ಸಂಘಟನಾ ಕಾರ್ಯದರ್ಶಿ ಎ.ನಾರಾಯಣನ್, ತಿರುವನಂತಪುರಂ ಮಹಾನಗರ ಮಹಿಳಾ ಪ್ರಮುಖ್ ಕಲಾಮಣಿ, ಉಪಾಧ್ಯಕ್ಷೆ ಮಧು, ಅಗಸ್ತ್ಯ ಕುದಿರಂ ಬಾಲಿಕಾ ಸದನ ಸಮಿತಿ ಅಧ್ಯಕ್ಷ ರಾಧಾಕೃಷ್ಣನ್, ಸುಧೀರ್, ಪ್ರಕಾಶ್, ಅಜಯನ್ ಅವರು ಸತ್ಯೇಂದ್ರ ಸಿಂಗ್ ಅವರನ್ನು ಬರಮಾಡಿಕೊಳ್ಳಲು ಉಪಸ್ಥಿತರಿದ್ದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries