HEALTH TIPS

ಸಿಲ್ವರ್‍ಲೈನ್ ಯೋಜನೆಯು ತಿರುವನಂತಪುರಂನಿಂದ ಕಾಸರಗೋಡಿಗೆ ನಾಲ್ಕು ಗಂಟೆಗಳು ಮತ್ತು ತಿರುವನಂತಪುರಂನಿಂದ ಕೊಚ್ಚಿಗೆ ಎರಡು ಗಂಟೆಗಳಲ್ಲಿ ತಲಪುವ ಯೋಜನೆಯಾಗಿತ್ತು: ಹಿಂತೆಗೆದ ಬಳಿಕ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ಸಿಲ್ವರ್‍ಲೈನ್ ಯೋಜನೆಯಿಂದ ಹೊರಬಂದಿರುವುದು ದುರದೃಷ್ಟಕರ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಜನರು ಕಡಿಮೆ ಸಮಯದಲ್ಲಿ ದೂರದ ಪ್ರಯಾಣ ಮಾಡಲು ಅನುವು ಮಾಡಿಕೊಡುವ ವ್ಯವಸ್ಥೆಯಾಗಿ ಈ ಯೋಜನೆಯನ್ನು ಯೋಜಿಸಲಾಗಿತ್ತು ಎಂದು ಅವರು ಹೇಳಿದರು.

ಮುಖ್ಯಮಂತ್ರಿ 5 ನೇ ವಿಶ್ವ ಕೇರಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  


ತಿರುವನಂತಪುರಂನಿಂದ ನಾಲ್ಕು ಗಂಟೆಗಳಲ್ಲಿ ಕಾಸರಗೋಡಿಗೆ ಮತ್ತು ತಿರುವನಂತಪುರಂನಿಂದ ಎರಡು ಗಂಟೆಗಳಲ್ಲಿ ಕೊಚ್ಚಿಗೆ ತಲುಪಲು ಸಾಧ್ಯವಾಗುತ್ತಿತ್ತು. ದುರದೃಷ್ಟವಶಾತ್, ಬೇರೆ  ಅಡ್ಡಿಯಾಯಿತು. ಹೈಸ್ಪೀಡ್ ರೈಲು ಯೋಜನೆಯನ್ನು ಕಾರ್ಯಗತಗೊಳಿಸಬೇಕಾದರೆ, ರೈಲ್ವೆಯಿಂದ ಅನುಮತಿ ಅಗತ್ಯವಿದೆ. ಸಿಲ್ವರ್ ಲೈನ್ ಗೆ ಅನುಮತಿ ಲಭಿಸಿಲ್ಲ. ರಾಜ್ಯ ಸರ್ಕಾರ ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸಿತು. ನಂತರ ಹೈಸ್ಪೀಡ್ ರೈಲು ಯೋಜನೆಯ ವರದಿಯನ್ನು ಕೇಂದ್ರಕ್ಕೆ ನೀಡಲಾಯಿತು ಮತ್ತು ಅವರು ಅದನ್ನು ಸ್ವೀಕರಿಸಲು ಸಿದ್ಧರಿದ್ದರು ಎಂದು ಇ. ಶ್ರೀಧರನ್ ಹೇಳಿರುವರು.

ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ತಿಳಿಯಲು ದೆಹಲಿಯಲ್ಲಿರುವ ಕೇರಳದ ಪ್ರತಿನಿಧಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಲು ತೆರಳಿ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ, ಮುಖ್ಯಮಂತ್ರಿಗಳು ರೈಲ್ವೆ ಸಚಿವರನ್ನು ಭೇಟಿಯಾದಾಗಲೂ ಅನುಕೂಲಕರ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಹೇಳಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries