ಕಾಸರಗೋಡು: ಎಡನೀರು ಶ್ರೀಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯಸಾನಿಧ್ಯ ಹಾಗೂ ನೇತೃತ್ವದಲ್ಲಿ ಫೆಬ್ರವರಿ 12 ರಿಂದ 16 ರವರೆಗೆ ಶ್ರೀ ವಿಷ್ಣುಮಂಗಲ ಕ್ಷೇತ್ರ ಎಡನೀರಿನಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ ತಾಂತ್ರಿಕ, ವೈದಿಕ, ಸಾಂಸ್ಕøತಿಕ, ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜ. 29ರಂದು ಸಂಜೆ 5ಕ್ಕೆ ಪರಮ ಪೂಜ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಮಠದಲ್ಲಿ ನಡೆಯಲಿದೆ. ಉತ್ಸವ ಸಮಿತಿ ಹಾಗೂ ಮಹಿಳಾ ಸಮಿತಿಯ ಸಭೆಯು ಅದೇ ದಿನ ಜರಗಲಿದ್ದು, ಈ ವರ್ಷ ವಿಶೇಷವಾಗಿ ನಡೆಯಲಿರುವ ಒತ್ತೆಕೋಲ ಮಹೋತ್ಸವದ ಬಗ್ಗೆಯೂ ಸಮಾಲೋಚನೆ ನಡೆಯಲಿರುವುದು. ಸಮಿತಿಯ ಎಲ್ಲಾ ಕಾರ್ಯಕರ್ತರು, ಭಕ್ತಾದಿಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

