ಕುಂಬಳೆ: ಮುಹಿಮ್ಮಾತ್ ಸ್ಥಾಪಕ ಸಯ್ಯೀದ್ ತ್ವಾಹಿರುಲ್ ಅಹ್ದಲ್ ತಂಙಳ್ರ 21ನೇ ಉರೂಸ್ಗೆ ಧ್ವಜಾರೋಹಣ ನಡೆಸಲಾಯಿತು. ಶನಿವಾರದ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸುವರು.
ಸ್ವಾಗತ ಸಮಿತಿ ಅಧ್ಯಕ್ಷ ಸೈನುಲ್ ಆಬಿದಿನ್ ತಂಙಳ್ ಎಣ್ಮೂರು ಧ್ವಜಾರೋಹಣಗೈದರು. ಬಿ.ಎಸ್. ಅಬ್ದುಲ್ಲ ಕುಂಞÂ ಫೈಸಿ, ಮೂಸಲ್ ಮದನಿ ತಲಕ್ಕಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಮುಹ್ಮದ್ ಅಬೀಬ್ ಅಹ್ದಲ್ ತಂಙಳ್, ಮುನಿರುಲ್ ಅಹ್ದಲ್ ತಂಙಳ್ ಸಹಿತ ಹಲವರು ಭಾಗವಹಿಸಿದರು. ಖದಮುಲ್ ಅಹ್ದಲಿಯ ಸದಸ್ಯರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಮುಗು ರೋಡ್ನಿಂದ ಆರಂಭಗೊಂಡ ಗಂಡುರ ಜಾಥಾದಲ್ಲಿ ನೂರಾರು ಮಂದಿ ಭಾಗವಹಿಸಿದರು. ಬಳಿಕ ನಡೆದ ತ್ವಾಹಿರುಲ್ ಅಹ್ದಲ್ ಮಖಾಂ ಸಮೂಹ ಸಿಯಾರತ್ಗೆ ಅಬ್ದುಲ್ ಅಸೀಸ್ ಹೈದ್ರೂಸಿ ತಂಙಳ್, ಖತ್ಮುಲ್ ಕುರಾನ್ ಮಜ್ಲೀಸ್ಗೆ ಮೊಹಮ್ಮದ್ ಪೂಕುಂಞÂ ತಂಙಳ್ ಕಲ್ಲಕಟ್ಟ ನೇತೃತ್ವ ನೀಡಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮ್ಮೇಳನದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಸಅದುಲ್ ಉಲಮ ಕೆ.ಪಿ. ಅಬ್ದುಲ್ ಮುಸ್ಲಿಯಾರ್ ಮಾಣಿಕ್ಕೋತ್ ಉದ್ಘಾಟಿಸಿದರು. ಮಶೂದ್ ತಂಙಳ್ ಪುರ ಪ್ರಾರ್ಥನೆ ನಡೆಸಿದರು. ಹಲವರು ಭಾಗವಹಿಸಿದ್ದರು. ಬೆಳಿಗ್ಗೆ ಹಜ್ ಅಧ್ಯಯನ ತರಗತಿ ನಡೆಯಿತು. ಸಂಜೆ 7 ಗಂಟೆಗೆ ಸ್ವಲಾತ್ ಮಜ್ಲಿಸ್ ನಡೆಯಿತು.

