ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 1ರಿಂದ 5ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
1ರಂದುಬೆಳಗ್ಗೆ ಗಣಪತಿಹವನ, ಧ್ವಜಾರೋಹಣ, ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ,ರಾತ್ರಿ7ಕ್ಕೆ ರಂಗಪೂಜೆ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಭಕ್ತಿಗಾನ, ಗೀತಾ ಸಾಹಿತ್ಯ ಸಂಭ್ರಮ, ಕೈಕೊಟ್ಟು ಕಳಿ, ರಾತ್ರಿ 8ಕ್ಕೆ 'ಶಿವದೂತೆ ಗುಳಿಗೆ'ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳುವುದು.
2ರಂದು ಬೆಳಗ್ಗೆ 108ಕಾಯಿ ಗಣಪತಿ ಹೋಮ, ಭಕ್ತಿಗಾನ ಸುಧಾ, ಸಾಹಿತ್ಯ ಗಾನವೈಭವ, ರಾತ್ರಿ 8ಕ್ಕೆ ನೃತ್ಯ ಪಲ್ಲವ ಕಾರ್ಯಕ್ರಮ ನಡೆಯುವುದು. 3ರಂದು ಬೆಳಗ್ಗೆ ಚಂಡಿಕಾ ಹವನ, ಸಂಜೆ 6ಕ್ಕೆ ಕಜಂಬು ಉತ್ಸವ, ರಾತ್ರಿ 8ಕ್ಕೆ ಶ್ರೀ ಉಳ್ಳಾಲ್ತೀ ನೇಮ ನಡೆಯುವುದು.
4ರಂದುಬೆಳಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 8ಕ್ಕೆ ಶ್ರೀ ವಿಷ್ಣುಮೂರ್ತಿ ಭಂಡಾರ ಹೊರಡುವುದು, 8.30ಕ್ಕೆ ಶ್ರೀ ದೈವಗಳ ತೊಡಙಳ್, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ ನಡೆಯುವುದು. 5ರಂದುಬೆಳಗ್ಗೆ 9ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ ಧ್ವಜಾವರೋಹಣ ನಡೆಯುವುದು.
ಚಪ್ಪರಮುಹೂರ್ತ:
ಇಡಿಯಡ್ಕ ಜಾತ್ರಾಮಹೋತ್ಸವದ ಆಮಂತ್ರಣಪತ್ರಿಕೆ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ ದೇವಾಲಯದಲ್ಲಿ ಜರುಗಿತು. ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಅವರಿಗೆ ಮುಕ್ಯ ಅರ್ಚಕರುಆಮಂತ್ರಣ ಹಸ್ತಾಂತರಿಸುವ ಮೂಲಕಬಿಡುಗಡೆಗೊಳಿಸಿದರು.


