HEALTH TIPS

ರಾಯಭಾರಿಗಳ ಕುಟುಂಬ ವಾಪಸ್‌ | ಭಾರತದ ನಿರ್ಧಾರಕ್ಕೆ ಯಾವ ಕಾರಣವೂ ಇಲ್ಲ: ಬಾಂಗ್ಲಾ

ಢಾಕಾ (PTI): 'ಬಾಂಗ್ಲಾದೇಶದಿಂದ ತನ್ನ ರಾಯಭಾರಿಗಳ ಕುಟುಂಬದವರನ್ನು ಭಾರತ ಮರಳಿ ಕರೆಸಿಕೊಳ್ಳುತ್ತಿರುವುದಕ್ಕೆ ಯಾವುದೇ ಕಾರಣವಿಲ್ಲ.ರಾಯಭಾರ ಅಧಿಕಾರಿಗಳಿಗೆ ಅಥವಾ ಅವರ ಕುಟುಂಬಸ್ಥರಿಗೆ ಇಲ್ಲಿ ಭದ್ರತಾ ಬೆದರಿಕೆಯೇನೂ ಇಲ್ಲ' ಎಂದು ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್‌ ತೋಹಿದ್‌ ಹುಸೈನ್‌ ಬುಧವಾರ ಹೇಳಿದ್ದಾರೆ.

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ದೇಶದಲ್ಲಿ ಹೆಚ್ಚುತ್ತಿರುವ ತೀವ್ರಗಾಮಿ ಚಟುವಟಿಕೆಗಳನ್ನು ಗಮನಿಸಿ, ಭದ್ರತಾ ಹಿತದೃಷ್ಟಿಯಿಂದ ತನ್ನ ರಾಯಭಾರ ಅಧಿಕಾರಿಗಳ ಕುಟುಂಬಗಳನ್ನು ಮರಳಿ ಕರೆಸಿಕೊಳ್ಳಲು ಭಾರತ ಕಳೆದವಾರ ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹುಸೈನ್‌, 'ಅಧಿಕಾರಿಗಳು ಅಥವಾ ಕುಟುಂಬಗಳಿಗೆ ಬೆದರಿಕೆ ಒಡ್ಡುವಂತಹ ಯಾವುದೇ ಪರಿಸ್ಥಿ‌ತಿ ಸೃಷ್ಟಿಯಾಗಿಲ್ಲ. ಆದಾಗ್ಯೂ, ಕುಟುಂಬಗಳನ್ನು ಮರಳಿ ಕರೆಸಿಕೊಳ್ಳುವುದು ಭಾರತದ ಆಂತರಿಕ ವಿಚಾರವಾಗಿದೆ. ಈ ಮೂಲಕ ಭಾರತ ಯಾವುದೋ ಸಂದೇಶ ನೀಡಲು ಬಯಸಿರಬಹುದು. ಆದರೆ, ನಮಗೆ ಯಾವ ಸ್ಪಷ್ಟ ಕಾರಣಗಳೂ ಕಂಡುಬಂದಿಲ್ಲ' ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries