HEALTH TIPS

ಸನಾತನ ಧರ್ಮ ಅಳಿಸಿಹಾಕುವುದು ಸುಲಭವಲ್ಲ: ಅಮಿತ್ ಶಾ

ಅಹಮದಾಬಾದ್‌: ಶತಮಾನಗಳಿಂದ ಸೋಮನಾಥ ದೇಗುಲದ ಮೇಲೆ ಪದೇ ಪದೇ ದಾಳಿಗಳು ನಡೆದರೂ ಅದು ಪುನರ್‌ನಿರ್ಮಾಣಗೊಂಡಿರುವುದನ್ನು ಉಲ್ಲೇಖಿಸಿ ಮಂಗಳವಾರ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು, 'ಸನಾತನ ಧರ್ಮ, ಸಂಸ್ಕೃತಿ ಮತ್ತು ಜನರ ನಂಬಿಕೆಯನ್ನು ಅಳಿಸಿಹಾಕುವುದು ಸುಲಭವಲ್ಲ' ಎಂದು ಹೇಳಿದರು.

ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ₹267 ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 'ದೇಗುಲವನ್ನು ನಾಶಮಾಡುವ ಸಲುವಾಗಿ ಹಲವಾರು ಮಂದಿ ದಾಳಿಗಳನ್ನು ಮಾಡಿದ್ದಾರೆ. ಆದರೆ ದೇಗುಲವು ಇಂದಿಗೂ ಅದೇ ಸ್ಥಳದಲ್ಲಿ ತಲೆಎತ್ತಿ ನಿಂತಿದೆ' ಎಂದರು.

'ಮೊಹಮ್ಮದ್‌ ಘಜ್ನಿಯು ಸೋಮನಾಥ ದೇಗುಲದ ಮೇಲೆ ದಾಳಿ ಮಾಡಿ ಒಂದು ಸಾವಿರ ವರ್ಷ ಪೂರ್ಣಗೊಂಡಿದ್ದು, ಆ ಕರಾಳ ದಿನದ ನೆನಪಿಗಾಗಿ ಆಚರಿಸಲಾಗುವ 'ಸೋಮನಾಥ ಸ್ವಾಭಿಮಾನ ಪರ್ವ'ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 11ರಂದು ಉದ್ಘಾಟಿಸಿದ್ದಾರೆ. ಒಂದು ಸಾವಿರ ವರ್ಷಗಳಲ್ಲಿ 16 ಬಾರಿ ಸೋಮನಾಥ ದೇಗುಲ ಧ್ವಂಸಗೊಂಡರೂ, ಅದರ ಪತಾಕೆ ಇಂದಿಗೂ ಹಾರುತ್ತಿದೆ' ಎಂದು ಹೇಳಿದರು. ‌

ಮೋದಿ ನಾಯಕತ್ವದಲ್ಲಿ ಸೋಮನಾಥ ಕಾರಿಡಾರ್‌ ನಿರ್ಮಾಣ ಮಾಡುವುದಾಗಿ ಅಮಿತ್‌ ಶಾ ಘೋಷಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries