ತಿರುವನಂತಪುರಂ: ಮೂವರು ಎಎಸ್ಪಿಗಳು ಮತ್ತು 24 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಮೂವರು ಇನ್ಸ್ಪೆಕ್ಟರ್ಗಳಿಗೆ ಡಿವೈಎಸ್ಪಿಗಳಾಗಿ ಬಡ್ತಿ ನೀಡಲಾಗಿದೆ.
ತ್ರಿಶೂರ್ ಅಪರಾಧ ವಿಭಾಗದ ಒಬ್ಬ ಎಎಸ್ಪಿ ವಿ.ಕೆ. ರಾಜು ಅವರನ್ನು ಎರ್ನಾಕುಳಂ ಗ್ರಾಮೀಣ ಎಎಸ್ಪಿಯಾಗಿ ನೇಮಿಸಲಾಗಿದೆ. ಎರ್ನಾಕುಳಂ ಗ್ರಾಮೀಣ ಹೆಚ್ಚುವರಿ ಎಎಸ್ಪಿ ಟಿ.ಬಿ. ವಿಜಯನ್ ಅವರನ್ನು ಪತ್ತನಂತ್ತಿಟ್ಟ ಎಎಸ್ಪಿಯಾಗಿ ಮತ್ತು ಪತ್ತನಂತ್ತಿಟ್ಟ ಎಎಸ್ಪಿ ಪಿ.ವಿ. ಬೇಬಿ ಅವರನ್ನು ತ್ರಿಶೂರ್ ನಗರ ಎಎಸ್ಪಿಯಾಗಿ ನೇಮಿಸಲಾಗಿದೆ.
ತಿರುವನಂತಪುರಂ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ವಿ.ಎಸ್. ಪ್ರಶಾಂತ್ ಅವರನ್ನು ಬಡ್ತಿ ನೀಡಿ ಕೊಚ್ಚಿ ನಗರ ನಿಯಂತ್ರಣ ಕೊಠಡಿ ಡಿವೈಎಸ್ಪಿಯಾಗಿ ನೇಮಿಸಲಾಗಿದೆ. ತಿರುವನಂತಪುರಂ ವಿಜಿಲೆನ್ಸ್ ವಿಶೇಷ ಘಟಕ 2 ಇನ್ಸ್ಪೆಕ್ಟರ್ ಎಸ್.ಎಂ. ಪ್ರದೀಪ್ ಕುಮಾರ್ ಅವರನ್ನು ಕೋಝಿಕ್ಕೋಡ್ ನಗರ ಸೈಬರ್ ಪೆÇಲೀಸ್ ಡಿವೈಎಸ್ಪಿಯಾಗಿ ನೇಮಿಸಲಾಗಿದೆ. ಸಿಬಿಐ ನಿಯೋಜನೆಯಲ್ಲಿದ್ದ ಇನ್ಸ್ಪೆಕ್ಟರ್ ಎನ್. ಬಿಜು ಅವರನ್ನು ಕೋಝಿಕ್ಕೋಡ್ ನಗರ ಸಂಚಾರ ದಕ್ಷಿಣ 2 ಡಿವೈಎಸ್ಪಿಯಾಗಿ ನೇಮಿಸಲಾಗಿದೆ.

