ಬದಿಯಡ್ಕ: ಚೆಂಗಳ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಮಾ. 8 ರಂದು ಎಡನೀರಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಚೆಂಗಳ ಪಂಚಾಯತಿ ಸಮಿತಿಯ ಮುಖ್ಯ ರಕ್ಷಾಧಿಕಾರಿ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಭಾನುವಾರ ಶ್ರೀ ಎಡನೀರು ಮಠದಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ರಕ್ಷಾಧಿಕಾರಿಗಳಾದ ರಾಜೇಂದ್ರ ಕಲ್ಲೂರಾಯ, ಶ್ರೀ ಎಡನೀರು ಮಠದ ವ್ಯವಸ್ಥಾಪಕ ವಿಷ್ಣುಮೂರ್ತಿ ಕಕ್ಕಿಲ್ಲಾಯ ಬೇವಿಂಜೆ, ಮಾಧವ ಹೇರಳ ಕಳೆರಿ, ಸಂಘಟನಾ ಸಮಿತಿಯ ಅಧ್ಯಕ್ಷ ಸತೀಶ ಕೆಮ್ಮಂಗಯ, ಸಂಯೋಜಕ ಅನಿಲ್ ಪೈಕ, ಕೋಶಾಧಿಕಾರಿ ಶಿವಪ್ರಸಾದ ಐಲುಕುಂಜೆ, ರಾಘವೇಂದ್ರ ಕೆದಿಲಾಯ, ವೇಣು ಮಾಸ್ತರ್ ಎಡನೀರು, ಸುನಿಲ್ ಕುದ್ರೆಪ್ಪಾಡಿ, ಸಾಮಾಜಿಕ ಕಾರ್ಯಕರ್ತರು ಹಾಗೂ ಇತರ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

.jpg)
