HEALTH TIPS

ಕರುವನ್ನೂರ್ ಬ್ಯಾಂಕ್ ಚುನಾವಣೆಯಲ್ಲಿ ಎಲ್‍ಡಿಎಫ್ ಗೆ ಭರ್ಜರಿ ಗೆಲುವು

ತ್ರಿಶೂರ್: ಕೇರಳ ಸಹಕಾರಿ ಸಂಸ್ಥೆಗಳ ಇತಿಹಾಸದಲ್ಲಿಯೇ ಅತಿದೊಡ್ಡ ವಂಚನೆ ನಡೆದ ಕರುವನ್ನೂರ್ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್‍ಡಿಎಫ್ ಗೆಲುವು ಸಾಧಿಸಿದೆ. ಎಲ್‍ಡಿಎಫ್ ಎಲ್ಲಾ ಸ್ಥಾನಗಳನ್ನು ಗೆದ್ದಿದೆ.


11 ಸ್ಥಾನಗಳಲ್ಲಿ ಸ್ಪರ್ಧೆ ನಡೆದಿತ್ತು. ಇದಕ್ಕೂ ಮೊದಲು, ಎರಡು ಸ್ಥಾನಗಳಲ್ಲಿ ಸಿಪಿಎಂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ, ಸಿಪಿಎಂ ಮತ್ತು ಬಿಜೆಪಿ ಕಣದಲ್ಲಿದ್ದವು.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಮಾಡಾಯಿಕೋಣಂನ ಟಿ.ಕೆ. ಚಾಥನ್‍ಮಾಸ್ಟರ್ ಸ್ಮಾರಕ ಶಾಲೆಯಲ್ಲಿ ಮತದಾನ ನಡೆಯಿತು. ನಂತರ ಫಲಿತಾಂಶಗಳನ್ನು ಘೋಷಿಸಲಾಯಿತು.

ಹತ್ತು ವರ್ಷಗಳ ಅಂತರದ ನಂತರ ಬ್ಯಾಂಕಿನ ಚುನಾವಣೆಗಳು ನಡೆಯುತ್ತಿವೆ. ಹಲವು ವರ್ಷಗಳಿಂದ ಸಿಪಿಎಂ ನಡೆಸುತ್ತಿದ್ದ ಬ್ಯಾಂಕ್ 2020 ರಿಂದ ಆಡಳಿತ ಸಮಿತಿಯ ನಿಯಂತ್ರಣದಲ್ಲಿದೆ. ಬ್ಯಾಂಕ್ ಕಾರ್ಯದರ್ಶಿ ದೂರು ದಾಖಲಿಸಿದರು ಮತ್ತು ಪೆÇಲೀಸರು ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿದರು. 15,000 ಸದಸ್ಯರಲ್ಲಿ ಬಹುಪಾಲು ಜನರು ಸಿಪಿಎಂ ಬೆಂಬಲಿಗರು. ಆದರೆ, 2016 ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ 6,000 ಜನರು ಮತ ಚಲಾಯಿಸಿದರು. ಈ ಬಾರಿ ಕೇವಲ 3,000 ಜನರು ಮಾತ್ರ ಮತ ಚಲಾಯಿಸಲು ಬಂದರು. ಬ್ಯಾಂಕಿನ ಆಡಳಿತವನ್ನು ನಿರ್ವಹಿಸುವುದು ಹೆಮ್ಮೆಯ ವಿಷಯವೆಂದು ಪರಿಗಣಿಸಿ ಸಿಪಿಎಂ ಹುರುಪಿನಿಂದ ಪ್ರಚಾರ ಮಾಡಿತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries