ಕೋಝಿಕೋಡ್: ಸಚಿವೆ ವೀಣಾ ಜಾರ್ಜ್ ವಿರುದ್ಧ ಪ್ರತಿಭಟನೆ ನಡೆಸಿದ ಕೆಎಸ್ಯು ನಾಯಕನ ಮನೆಯ ಮೇಲೆ ಸ್ಫೋಟಕ ವಸ್ತು ಎಸೆಯಲಾಗಿದೆ.
ಕೋಝಿಕೋಡ್ನ ತಿರುವಳ್ಳೂರಿನಲ್ಲಿರುವ ಜಿಲ್ಲಾ ಕಾರ್ಯದರ್ಶಿ ಬಿತುಲ್ ಬಾಲನ್ ಅವರ ಮನೆಯ ಮೇಲೆ ದಾಳಿ ನಡೆದಿದೆ. ಇಂದು ಬೆಳಗಿನ ಜಾವ 2.30 ಕ್ಕೆ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ಸಚಿವೆ ವಿರುದ್ಧ ಕಪ್ಪು ಬಾವುಟ ತೋರಿಸಿದ ನಂತರ ಬಂಧಿಸಲ್ಪಟ್ಟ ಬಿತುಲ್ ಬಾಲನ್ ಪೋಲೀಸ್ ವಶದಲ್ಲಿದ್ದಾರೆ.
ಈ ಮಧ್ಯೆ, ಕಣ್ಣೂರಿನಲ್ಲಿ ಕೆಎಸ್ಯು ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಗಾಯಗೊಂಡ ಆರೋಗ್ಯ ಸಚಿವರನ್ನು ಪರಿಯಾರಂ ವೈದ್ಯಕೀಯ ಕಾಲೇಜಿನಿಂದ ಬಿಡುಗಡೆ ಮಾಡಲಾಗಿದೆ.
ಸಚಿವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ರಾತ್ರಿ ನಡೆದ ಆನ್ಲೈನ್ ವೈದ್ಯಕೀಯ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಚಿವರು ಮತ್ತು ಅವರ ತಂಡವು ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆ ಮೂಲಕ ತಿರುವನಂತಪುರಂಗೆ ತೆರಳಿದರು. ಅವರು ತಮ್ಮ ಕಾರಲ್ಲಿ ಪ್ರಯಾಣಿಸಿದರು. ರಾತ್ರಿಯ ಹೊತ್ತಿಗೆ ಸಚಿವರ ಆರೋಗ್ಯ ಸ್ಥಿತಿ ಮತ್ತಷ್ಟು ಸುಧಾರಿಸಿತು.ಅವರ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ವೈದ್ಯಕೀಯ ಮಂಡಳಿ ನಿರ್ಣಯಿಸಿತು. ಈ ಹಿನ್ನೆಲೆಯಲ್ಲಿ ಅವರನ್ನು ತಿರುವನಂತಪುರಂಗೆ ಸ್ಥಳಾಂತರಿಸಲಾಯಿತು ಎನ್ನಲಾಗಿದೆ.
ಏತನ್ಮಧ್ಯೆ, ಸಚಿವರ ಹೇಳಿಕೆಯನ್ನು ದಾಖಲಿಸಲು ತನಿಖಾ ತಂಡ ಇಂದು ಮತ್ತೆ ಅನುಮತಿ ಕೋರಲಿದೆ. ಸಚಿವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಕಳೆದ ದಿನಗಳಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಕೆಎಸ್ಯು ಪ್ರತಿಭಟನೆ ನಡೆದ ಸ್ಥಳದ ಕ್ಯಾಮೆರಾ ದೃಶ್ಯಾವಳಿಗಳನ್ನು ಕೋರಿ ತನಿಖಾ ತಂಡ ಆರ್ಪಿಎಫ್ಗೆ ಅರ್ಜಿ ಸಲ್ಲಿಸಿದೆ.

