ಕಾಸರಗೋಡು: ನಗರದ ಕೂಡ್ಲು ನಿವಾಸಿ, ನಿವೃತ್ತ ಬ್ಯಾಂಕ್ ಪ್ರಬಂಧಕ, ಗಡಿನಾಡು ಕಾಸರಗೋಡಿನ ಖ್ಯಾತ ಜಾದೂಗಾರ, ಪ್ರೊ. ಮಾಧವ (73)ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಯಕ್ಷಿಣಿ ಕಲಾವಿದ ಗಣೇಶ್ ಕುದ್ರೋಳಿ ಅವರ ಗುರುವಾಗಿದ್ದರು.
ನಾರ್ತ್ ಮಲಬಾರ್ ಬ್ಯಾಂಕ್ ನಲ್ಲಿ ಪ್ರಬಂಧಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ಅವರು ನಾರ್ತ್ ಮಲಬಾರ್ ಮ್ಯಾಜಿಕ್ ಫೌಂಡೇಷನ್ ಸ್ಥಾಪಿಸಿದ್ದರು. 15 ಮಂದಿಯ ತಂಡ ಕಟ್ಟಿ "ಮಾಯಾ ರಂಜಿನಿ' ಎಂಬ ಹೆಸರಿನಲ್ಲಿ ಕೇರಳ ಹಾಗೂ ಕರ್ನಾಟಕದಾದ್ಯಂತ ನೂರಾರು ಪ್ರದರ್ಶನಗಳನ್ನು ನೀಡಿದ್ದರು.
ಮೂಲತಃ ಉಬ್ರಂಗಳ ನಿವಾಸಿಯಾಗಿದ್ದ ಇವರು ಬ್ಯಾಂಕ್ನಿಂದ ನಿವೃತ್ತರಾದ ಬಳಿಕ ಕೂಡ್ಲಿನಲ್ಲಿ ನೆಲೆಸಿದ್ದರು. ಇವರು ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.


