ಕೋಝಿಕೋಡ್: ದುಃಖದ ನಡುವೆಯೂ ವಿವಾಹ ಕಾರ್ಯಕ್ರಮವೊಂದು ಅಲ್ಪ ಸಂತಸ ದಾಟಿಸಲು ಸಾಧ್ಯವಾಯಿತು. ಕರ್ನಾಟಕದ ಶಿರೂರಿನಲ್ಲಿ ಭೂಕುಸಿತದಲ್ಲಿ ಮೃತಪಟ್ಟ ಅರ್ಜುನ್ ಸಹೋದರಿ ವಿವಾಹವಾದರು. ಅರ್ಜುನ್ ಅವರ ನೆನಪುಗಳಿಂದ ತುಂಬಿದ ಸಭಾಂಗಣದಲ್ಲಿ, ಪ್ರಕಾಶನ್ ಮತ್ತು ರಜಿತಾ ಅವರ ಪುತ್ರ ಆದರ್ಶ್, ಚಾತಮಂಗಲAನ ಕರಪರಂಬತ್ ಮನೆಯಲ್ಲಿ ಅಭಿರಾಮಿಯನ್ನು ವಿವಾಹವಾದರು. ವಿವಾಹವು ಭಾನುವಾರ ಕೋಝಿಕೋಡ್ನ ಕನ್ನಡಿಕಲ್ನಲ್ಲಿರುವ ಸಿ. ಕುಂಞÂ ಕುಟ್ಟಿ ಸ್ಮಾರಕ ಭವನದಲ್ಲಿ ನಡೆಯಿತು.
ಪುತ್ರನಿಲ್ಲದ ನೋವಿನ ಹೊರತಾಗಿಯೂ, ಕನ್ನಡಿಕಲ್ನ ಮೂಲಡಿಕುಝಿಯಿಲ್ನಲ್ಲಿ ಅರ್ಜುನ್ ತಂದೆ ಪ್ರೇಮನ್ ಮತ್ತು ತಾಯಿ ಶೀಲಾ ಪುತ್ರಿಯ ವಿವಾಹಕ್ಕೆ ಕೊನೆಗೂ ತಯಾರಾದರು. ತನ್ನ ಸಹೋದರಿ ಮದುವೆಯಾಗಬೇಕೆಂಬುದು ಅರ್ಜುನ್ನ ದೊಡ್ಡ ಆಸೆಯಾಗಿತ್ತು.
ಅಭಿರಾಮಿಯ ನಿಶ್ಚಿತಾರ್ಥಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗ ಅರ್ಜುನ್ ನಾಪತ್ತೆಯಾಗಿದ್ದ. ೨೦೨೪ರ ಜುಲೈ ೧೬ ರಂದು, ಕರ್ನಾಟಕದ ಬೆಳಗಾವಿಯಿಂದ ಮರ ಸಾಗಿಸುತ್ತಿದ್ದ ಅರ್ಜುನ್ ಅವರ ಲಾರಿ, ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರ ಬಳಿಯ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕಾಣೆಯಾಗಿತ್ತು.
ಜುಲೈ ೮, ೨೦೨೪ ರಂದು ಮನೆಯಿಂದ ಹೊರಟಿದ್ದ ಅರ್ಜುನ್ ಕೊನೆಯದಾಗಿ ೧೫ ನೇ ತಾರೀಖಿನ ರಾತ್ರಿ ಮನೆಗೆ ಕರೆ ಮಾಡಿದ್ದರು. "ಅಪ್ಪ, ಸಹೋದರಿಯ ಮದುವೆ ನಿಶ್ಚಿತಾರ್ಥದ ಬಗ್ಗೆ ಚಿಂತಿಸಬೇಡಿ... ನಾನು ಬಂದು ಎಲ್ಲಾ ವಸ್ತುಗಳನ್ನು ಖರೀದಿಸುತ್ತೇನೆ. ಮನೆಗೆ ಬಣ್ಣ ಬಳಿಯೋಣ" - ಆ ದಿನ ಅವರು ಕೊನೆಯದಾಗಿ ಹೇಳಿದ್ದು ತಂಗಿಯ ನಿಶ್ಚಿತಾರ್ಥದ ಬಗ್ಗೆ. ದೀರ್ಘ ಹುಡುಕಾಟದ ನಂತರ, ೭೨ ದಿನಗಳ ನಂತರ, ಸೆಪ್ಟೆಂಬರ್ ೨೪ ರಂದು, ಅರ್ಜುನ್ ಅವರ ಲಾರಿ ಮತ್ತು ದೇಹವು ಹತ್ತಿರದ ಗಂಗಾವಳಿಹೊಳೆಯಲ್ಲಿ ಪತ್ತೆಯಾಗಿತ್ತು.

