ಮಹಾಸಮುಂದ್: ಹಿರಿಯ ನಕ್ಸಲ್ ನಾಯಕ ವಿಕಾಸ್ ಸೇರಿ 15 ನಕ್ಸಲರು ಛತ್ತೀಸಗಢದ ಮಹಾಸಮುಂದ್ ಜಿಲ್ಲೆಯಲ್ಲಿ ಭಾನುವಾರ ಶರಣಾಗಿದ್ದಾರೆ. ಇವರ ಸುಳಿವು ನೀಡಿದರೆ ಒಟ್ಟು ₹73 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಈ ಶರಣಾಗತಿಯೊಂದಿಗೆ ಒಡಿಶಾದೊಂದಿಗೆ ಗಡಿ ಹಂಚಿಕೊಂಡಿರುವ ರಾಯ್ಪುರ-ಸಂಬಲ್ಪುರ ಪ್ರದೇಶದಲ್ಲಿ ನಕ್ಸಲ್ ಚಳವಳಿಯನ್ನು ಸಂಪೂರ್ಣವಾಗಿ ಕಿತ್ತುಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಶರಣಾದವರಲ್ಲಿ ಒಂಬತ್ತು ಮಹಿಳೆಯರು ಇದ್ದು, ಎಲ್ಲರೂ ಛತ್ತೀಸಗಢ-ಒಡಿಶಾ ಗಡಿಯಲ್ಲಿ ಸಕ್ರಿಯವಾಗಿದ್ದ ಸಿಪಿಐ(ಮಾವೋವಾದಿ) ಪಕ್ಷದ ಬಲಾಂಗಿರ್-ಬರ್ಗಢ-ಮಹಾಸಮುಂದ್ (ಬಿಬಿಎಂ) ವಲಯದವರು ಎಂದು ಅವರು ಹೇಳಿದ್ದಾರೆ.

