ಇದರ ಪರಿಣಾಮ, ಜಗತ್ತಿನ ಹಲವು ದೇಶಗಳಲ್ಲಿ ತೈಲದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಅರಬ್ & ತೈಲ ಸಿಗುವ ದೇಶಗಳನ್ನು ಬಿಟ್ಟು ಪ್ರಪಂಚದ ಮೂಲೆ ಮೂಲೆಯಲ್ಲೂ ಕಚ್ಚಾ ತೈಲಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ಹರ್ಮುಜ್ ಜಲಸಂಧಿಯ ಮೇಲೆ ಇರಾನ್ ದಾಳಿ ಮಾಡುತ್ತಿದ್ದು, ಹರ್ಮುಜ್ ಜಲಸಂಧಿ ಬಂದ್ ಆಗಿದೆ. ಇಂತಹ ಸಮಯದಲ್ಲೂ ಭಾರತ ಮಾತ್ರ ತೈಲದ ವಿಚಾರದಲ್ಲಿ ಫುಲ್ ಸೇಫ್ ಆಗಿದೆ.
ಅಂದಹಾಗೆ ಅಮೆರಿಕ ಮತ್ತು ಚೀನಾ ಇಡೀ ಜಗತ್ತಿನಲ್ಲಿ ಅತಿಹೆಚ್ಚು ತೈಲ ಬಳಸುವ ದೇಶಗಳಾಗಿದ್ದು, ಈ ಎರಡು ದೇಶಗಳನ್ನ ಬಿಟ್ಟರೆ ಭಾರತವೇ ಇಡೀ ಜಗತ್ತಿನ 3ನೇ ಅತಿದೊಡ್ಡ ತೈಲ ಗ್ರಾಹಕ ರಾಷ್ಟ್ರವಾಗಿದೆ ಎಂಬುದು ಗಮನಾರ್ಹ ವಿಚಾರ. ಪ್ರತಿದಿನ ಭಾರತ ಸುಮಾರು 5.5 ದಶಲಕ್ಷ ಬ್ಯಾರೆಲ್ ಕಚ್ಚಾತೈಲದ ಬಳಕೆ ಮಾಡುತ್ತಿದ್ದು, ಈ ಪೈಕಿ ಬರೋಬ್ಬರಿ 1.5 ರಿಂದ 2 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವು ಇದೇ ಹರ್ಮುಜ್ ಜಲಸಂಧಿ ಮೂಲಕ ಸಪ್ಲೈ ಆಗುತ್ತಿದೆ. ಆದರೆ ದಿಢೀರ್ ಈ ಹರ್ಮುಜ್ ಜಲಸಂಧಿ ಬಂದ್ ಆಗಿರುವ ಕಾರಣಕ್ಕೆ ತಲ್ಲಣ ಸೃಷ್ಟಿಯಾಗಿದ್ದು, ಜಗತ್ತಿನ ಹಲವು ದೇಶಗಳು ಪರದಾಡುತ್ತಿವೆ. ಆದರೆ ಈ ವಿಚಾರದಲ್ಲಿ ಭಾರತ ತುಂಬಾ ಜಾಣ ನಡೆ ಇಟ್ಟಿರುವ ಕಾರಣಕ್ಕೆ, ಯುದ್ಧ ಇದೇ ರೀತಿ ಮುಂದುವರಿದು ದಾಳಿ ಆಗುತ್ತಿದ್ದರೂ ಮುಂದಿನ 74 ದಿನಗಳ ತನಕ ಯಾವುದೇ ಸಮಸ್ಯೆ ಇಲ್ಲವಂತೆ.
ಇಸ್ರೇಲ್ ಸೇನೆಯಿಂದ ಮತ್ತಷ್ಟು ದಾಳಿ?
ಇರಾನ್ ನಡೆಸುತ್ತಿರುವ ಪ್ರತಿದಾಳಿಗೆ ಉತ್ತರ ಕೊಡಲು ಅಮೆರಿಕ ಮತ್ತು ಇಸ್ರೇಲ್ ಸಜ್ಜಾಗಿದ್ದು, ಈಗ ಮತ್ತೊಂದು ಸುತ್ತಿನಲ್ಲಿ ಘೋರವಾಗಿ ಇರಾನ್ ಮೇಲೆ ದಾಳಿ ಮಾಡಲು ಸಕಲ ಸಿದ್ಧತೆ ಸಾಗಿವೆ. ಇದೇ ಕಾರಣಕ್ಕೆ ಇರಾನ್ ಇನ್ನಷ್ಟು ಸೇಡಿನ ಕ್ರಮಗಳಿಗೆ ಅರಬ್ ದೇಶಗಳು ಅಂದ್ರೆ ಕುವೈತ್, ಯುಎಇ, ಕತಾರ್ ಸೇರಿ ಹಲವು ದೇಶಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಈ ನಡುವೆ ಕಚ್ಚಾತೈಲ ಪೂರೈಕೆ ಕೂಡ ಇನ್ನಷ್ಟು ಕಷ್ಟವಾಗಲಿದೆ. ಆದರೆ ಭಾರತ ಮುನ್ನೆಚ್ಚರಿಕೆ ವಹಿಸಿ ತೈಲ ಸಂಗ್ರಹವನ್ನ ಮಾಡಿಕೊಂಡಿದ್ದು, ಮುಂದಿನ 74 ದಿನಗಳ ತನಕ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಮಾಹಿತಿ ನೀಡಿದ್ದಾರೆ.

