ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ನವೀಕರಿಸಿದ ಮುಂಡಪಳ್ಳ-ದೇಲಂಪಾಡಿ ಕೆಜಿಎನ್ ರಸ್ತೆಯನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಶುಕ್ರವಾರ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಈ ರಸ್ತೆಯನ್ನು ಶಾಸಕರ ಆಸ್ತಿ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಲಾಗಿದ್ದು, 20 ಲಕ್ಷ ರೂ.ಗಳನ್ನು ವೆಚ್ಚ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎ. ಬಲ್ಕೀಸ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರೀಫ್, ಜಿಲ್ಲಾ ಪಂಚಾಯತಿ ಸದಸ್ಯ ಅಝೀಝ್ ಕಳತ್ತೂರು, ಕಾಸರಗೋಡು ಬ್ಲಾಕ್ ಪಂಚಾಯತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಅಝೀಝ್ ಮರಿಕೆ, ಪಂಚಾಯತಿ ಸದಸ್ಯರಾದ ಎಂ.ಸಬೂರ, ಫಝಲ್ ಪೇರಾಲ್, ಗ್ರಾಮ ಪಂಚಾಯತಿ ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎನ್. ಮುಹಮ್ಮದಲಿ, ಅಶ್ರಫ್ ಕೊಡ್ಯಮೆ, ಮುಹಮ್ಮದ್ ಮಮ್ಮುಟ್ಟಿ ಮುಳಿಯಡ್ಕ, ಅಬ್ದು ಪೆಲ್ತಡ್ಕ, ಲತೀಫ್ ಮುಳಿಯಡ್ಕ, ಐ.ಸಿ. ಅಬ್ದು, ಶಮ್ಮು ಮುಳಿಯಡ್ಕ ಮತ್ತಿತರರು ಮಾತನಾಡಿದರು.

.jpeg)
.jpeg)
