ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಸಿನ್ಹಾ ಅವರು ಸರಸ್ವತಿ ಅವರ ಅನುಯಾಯಿಯಾಗಿರುವ ಮುಕುಂದಾನಂದ ಗಿರಿ ಅವರಿಗೆ ಕೂಡ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದಾರೆ.
ಆರೋಪದ ಕುರಿತಂತೆ ತನಿಖೆ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಜ್ಯೋತಿರ್ಮಠದ ಮುಖ್ಯಸ್ಥರಾಗಿರುವ ಸರಸ್ವತಿ ಅವರು ಪ್ರಯಾಗ್ರಾಜ್ನ ಶಿಬಿರದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳಿಗೆ ಈ ಪ್ರಕರಣ ಸಂಬಂಧಿಸಿದೆ.

