ತಿರುವನಂತಪುರಂ: ವಿಧಾನಸಭಾ ಚುನಾವಣೆಯಲ್ಲಿ ಪೆರಾವೂರ್ ನಿಂದ ಸ್ಪರ್ಧಿಸಲು ಕೆ.ಕೆ. ಶೈಲಜಾ ಸಿದ್ಧತೆಯಲ್ಲಿದ್ದಾರೆ. ನಿನ್ನೆ ನಡೆದ ಸಿಪಿಎಂ ಸಭೆಯಲ್ಲಿ ಕೆ.ಕೆ. ಶೈಲಜಾ ಸ್ಪರ್ಧಿಸಲು ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಮುಂದಿನ ಸೆಕ್ರೆಟರಿಯೇಟ್ ನಲ್ಲಿ ಅಭ್ಯರ್ಥಿತ್ವದ ಬಗ್ಗೆ ಪಕ್ಷವು ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ಯುಡಿಎಫ್ ವಶಪಡಿಸಿಕೊಂಡಿರುವ ಪೆರಾವೂರ್ ಕ್ಷೇತ್ರವನ್ನು ಮರಳಿ ಪಡೆಯಲು ಸನ್ನಿ ಜೋಸೆಫ್ ವಿರುದ್ಧ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಪ್ರಸ್ತುತ ಮಟ್ಟನೂರ್ ಕ್ಷೇತ್ರದ ಶಾಸಕಿಯಾಗಿರುವ ಶೈಲಜಾ ಅವರ ಬದಲಿಗೆ ಡಿವೈಎಫ್.ಐ ರಾಜ್ಯ ಕಾರ್ಯದರ್ಶಿ ವಿ.ಕೆ. ಸನೋಜ್ ಅವರನ್ನು ಕಣಕ್ಕಿಳಿಸಲು ಜಿಲ್ಲಾ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ.

