ಕಾಸರಗೋಡು: ಬ್ರಾಹ್ಮಣ ಪರಿಷತ್ ಕಾಸರಗೋಡು ಇದರ ರಜತ ಮಹೋತ್ಸವದ ಅಂಗವಾಗಿ 2026 ಏ.3 ರಂದು ಶ್ರೀ ಎಡನೀರು ಮಠದಲ್ಲಿ ಜರಗುವ ಬ್ರಾಹ್ಮಣ ಸಮಾವೇಶ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಶ್ರೀ ಎಡನೀರು ಮಠದಲ್ಲಿ ಶುಕ್ರವಾರ ಸಂಜೆ ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಅನುಗ್ರಹ ಆಶೀರ್ವಾದ ನೀಡಿದರು.
ಈ ಸಂಧರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ಬ್ರಾಹ್ಮಣ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಮತ್ತು ಅವರ ಕುಟುಂಬ, ಉಪಾಧ್ಯಕ್ಷ ಡಾ. ಎಂ ಸತ್ಯನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯನಾರಾಯಣ ತಾಯನ್ನೂರು ಹಾಗೂ ಪ್ರೊ.ಎ. ಶ್ರೀನಾಥ್ ಉಪಾಧ್ಯಾಯ ಉಪಸ್ಥಿತರಿದ್ದರು.


.jpg)
