ಕಲ್ಪೆಟ್ಟಾ : ಬುಡಕಟ್ಟು ಜನಾಂಗದ ಅಭಿವೃದ್ಧಿ ಚಟುವಟಿಕೆಗಳು ಅವರ ಗುರುತಿನ ಪ್ರಜ್ಞೆ ಮತ್ತು ಶ್ರೇಷ್ಠ ಸಾಂಸ್ಕøತಿಕ ಗುಣಲಕ್ಷಣಗಳನ್ನು ಗೌರವಿಸಬೇಕು ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದರು.
ಬುಡಕಟ್ಟು ಮಕ್ಕಳಿಗೆ ಕನಿಷ್ಠ ಶಾಲಾ ಮಟ್ಟದಲ್ಲಿಯಾದರೂ ತಮ್ಮ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ನೀಡಿದರೆ ಮಾತ್ರ ಅವರು ಶಿಕ್ಷಣದತ್ತ ಆಕರ್ಷಿತರಾಗಬಹುದು. ಬುಡಕಟ್ಟು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಬುಡಕಟ್ಟು ಶಿಕ್ಷಣ ಕಾರ್ಯಕರ್ತರು ಮತ್ತು ಸಂಶೋಧಕರೊಂದಿಗೆ ನಡೆದ ಅನೌಪಚಾರಿಕ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು.
ಬರಹಗಾರ ಓ.ಕೆ.ಜಾನಿ ಅಧ್ಯಕ್ಷತೆ ವಹಿಸಿದ್ದರು. ಕಿರ್ತಡ್ಸ್ ಉಪನಿರ್ದೇಶಕ ಡಾ. ಕೆ.ಎಸ್.ಪ್ರದೀಪ್ ಕುಮಾರ್, ಐಟಿಎನ್ ಆರ್ ನಿರ್ದೇಶಕ ಹರಿಕುಮಾರ್, ಡಾ. ಎಂ.ಪಿ.ವಾಸು, ಜಯಶ್ರೀ, ಸಿ.ವಿ.ಪ್ರಜೋದ್, ಶ್ಯಾಮ್ಜಿತ್, ಬಿಂದು, ಸುಮಿ ಮತ್ತು ಅಂಜಲಿ ಪ್ರಿಯಾ ಭಾಗವಹಿಸಿದ್ದರು

