HEALTH TIPS

ಚುನಾವಣೆಯಲ್ಲಿ ಗೆಲ್ಲಲು ಸತೀಶನ್ RSS ಬೆಂಬಲ ಕೋರಿದ್ದರು: ಸಂಘ ಪರಿವಾರದ ನಾಯಕ

 ಕೊಚ್ಚಿ: ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ ಅವರು 2001 ಮತ್ತು 2006ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಆರ್‌ಎಸ್‌ಎಸ್ ಬೆಂಬಲವನ್ನು ಕೋರಿದ್ದರು ಎಂದು ಸಂಘ ಪರಿವಾರದ ಪ್ರಮುಖ ನಾಯಕ ಆರ್.ವಿ. ಬಾಬು ಶನಿವಾರ ಆರೋಪಿಸಿದ್ದಾರೆ. 


ಆದರೆ, ಬಾಬು ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್‌ ತಿರಸ್ಕರಿಸಿದ್ದು, ' ನಾನು ಎಂದಿಗೂ ಆರ್‌ಎಸ್‌ಎಸ್‌ ಅಥವಾ ಬಿಜೆಪಿಯ ವೋಟುಗಳನ್ನು ಕೇಳಿಲ್ಲ' ಎಂದಿದ್ದಾರೆ.

ಆರ್‌ಎಸ್‌ಎಸ್‌ ಪರ ಸಂಘಟನೆಯಾಗಿರುವ 'ಹಿಂದೂ ಐಕ್ಯ ವೇದಿ' ರಾಜ್ಯ ಘಟಕದ ಅಧ್ಯಕ್ಷರಾಗಿರುವ ಬಾಬು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, 'ಸಿಪಿಐ ನಾಯಕ ರಾಜು ಅವರ ಎದುರು 1996ರಲ್ಲಿ ಸತೀಶನ್‌ ಹೀನಾಯವಾಗಿ ಸೋತಿದ್ದರು. ಆ ಬಳಿಕ ಚುನಾವಣೆಯಲ್ಲಿ ಗೆಲ್ಲಲು ಆರ್‌ಎಸ್‌ಎಸ್‌ ಬೆಂಬಲ ಕೋರಿದ್ದರು' ಎಂದಿದ್ದಾರೆ.

ಜತೆಗೆ '2006ರಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ತಾನು ಭಾಗಿಯಾಗಿರಲಿಲ್ಲ ಎಂದೇ ಸತೀಶನ್‌ ಈ ಹಿಂದೆ ವಾದಿಸಿದ್ದರು. ಆದರೆ, ಈಗ ಭಾಗಿಯಾಗಿದ್ದೆ ಎಂಬುದನ್ನು ಒಪ‍್ಪಿಕೊಂಡಿದ್ದಾರೆ. ಹಾಗೆಯೇ ಮುಂದೆ ಒಂದು ದಿನ ತಾನು ಆರ್‌ಎಸ್‌ಎಸ್‌ ಬೆಂಬಲ ಕೋರಿದ್ದೆ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ' ಎಂದೂ ಬಾಬು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸತೀಶನ್, ಬಾಬು ಅವರು ನಾನು ಸೋಲಬೇಕೆಂದು ಬಯಸುತ್ತಿದ್ದಾರೆ. ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಜೊತೆ ಯಾವುದೇ ಒಪ್ಪಂದವಾಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. 2001 ಮತ್ತು 2006ರ ಚುನಾವಣೆಯಲ್ಲಿ ನಾನು ಆರ್‌ಎಸ್‌ಎಸ್ ಬೆಂಬಲ ಕೋರಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries