HEALTH TIPS

ಪಕ್ಷದ ಸಭೆಗೆ ಹಾಜರಾಗದಿದ್ದಕ್ಕಾಗಿ ಸಿಪಿಎಂ ಎಲ್‍ಸಿ ಕಾರ್ಯದರ್ಶಿಯಿಂದ ನಿಂದನೆ: ಕ್ಯಾನ್ಸರ್ ಸಂತ್ರಸ್ಥೆಯಿಂದ ಕೆಲಸಕ್ಕೆ ರಾಜೀನಾಮೆ

ತ್ರಿಶೂರ್: ಪಕ್ಷದ ಸಭೆಗೆ ಹಾಜರಾಗದಿದ್ದಕ್ಕಾಗಿ ಸಿಪಿಎಂ ಸ್ಥಳೀಯ ಸಮಿತಿ ಕಾರ್ಯದರ್ಶಿಯಿಂದ ನಿಂದನೆ ಮತ್ತು ಬೆದರಿಕೆಗೆ ಒಳಗಾದ ನಂತರ ಕ್ಯಾನ್ಸರ್ ಸಂತ್ರಸ್ಥೆ ಮಹಿಳೆಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕುನ್ನಂಕುಳಂ ನಗರಸಭೆಯಲ್ಲಿ ಎಸ್‍ಸಿ ಕಾರ್ಯನಿರ್ವಾಹಕಿಯಾಗಿರುವ ಸ್ವಾತಿ ಸೋಮನ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. 


ದೈಹಿಕವಾಗಿ ಅಂಗವಿಕಲರಾಗಿರುವ ಕುನ್ನಂಕುಳಂ ಈಸ್ಟ್ ನ ಸ್ಥಳೀಯ ಕಾರ್ಯದರ್ಶಿ ತಮ್ಮ ಮೇಲೆ ತೋರಿಸಿದ ಕ್ರೂರ ವರ್ತನೆಯಿಂದಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಸ್ವಾತಿ ಹೇಳಿದರು. ಪಕ್ಷದ ಸದಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ತಾನು ಮನುಷ್ಯ. ಹಸಿವಿನಿಂದ, ಹೊಡೆತಗಳನ್ನು ಸಹಿಸಿಕೊಂಡು, ಉಗುಳುತ್ತಾ ಮತ್ತು ನೋವು ಅನುಭವಿಸುತ್ತಾ ಇಲ್ಲಿಗೆ ಬಂದಿರುವೆ. ಯಾರ ಆಜ್ಞೆಯ ಮೇರೆಗೆಗೂ ತಾನು ಇರಲು ಸಾಧ್ಯವಿಲ್ಲ ಎಂದು ಸ್ವಾತಿ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

ಮಾರ್ಚ್ 9 ರಂದು, ಕುನ್ನಂಕುಳಂ ಈಸ್ಟ್  ಸ್ಥಳೀಯ ಸಮಿತಿ ಕಾರ್ಯದರ್ಶಿ ಸಮಿತಿಗೆ ಹಾಜರಾಗದಿದ್ದಕ್ಕಾಗಿ ಸ್ವಾತಿ ಅವರನುÉ್ಟ್ಪೂೀನ್‍ನಲ್ಲಿ ನಿಂದಿಸಲಾಗಿತ್ತು. ನಂತರ ಅವರು ರಾಜೀನಾಮೆ ನೀಡುವಂತೆ ಸೂಚಿಸಿದ್ದು, ಪಕ್ಷವೇ ಅವರಿಗೆ ಕೆಲಸ ನೀಡಿತ್ತು. ಇದರ ನಂತರ, ಸ್ವಾತಿ ಮಾರ್ಚ್ 10 ರಂದು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries