HEALTH TIPS

ಬೇಪೂರ್ ನಲ್ಲಿ ಅಮಿತ್ ಶಾ ಅವರ ರೋಡ್ ಶೋ; ಪ್ರಯಾಣದ ಕೊನೆಯ ಬದಲಾವಣೆ, ವೆಸ್ಟ್‍ಹಿಲ್ ನಿಂದ ಹಿಂತಿರುಗಿದ ಶಾ

ಕೋಝಿಕೋಡ್: ಮತಗಟ್ಟೆಯನ್ನು ತಲುಪಲು ಗಂಟೆಗಳು ಬಾಕಿ ಇರುವಾಗ, ಬೇಪೂರ್ ಕರಾವಳಿಯಲ್ಲಿ ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರ ರೋಡ್ ಶೋ ಎನ್.ಡಿಎ ತಂಡದಲ್ಲಿ  ಉತ್ಸಾಹದ ಅಲೆಯನ್ನು ಸೃಷ್ಟಿಸಿತು. ಅವರು ಗುಲಾಬಿ ದಳಗಳನ್ನು ಚೆಲ್ಲುವ ಮೂಲಕ ಮತ್ತು ನಗುವಿನೊಂದಿಗೆ ಕೈ ಬೀಸುವ ಮೂಲಕ ಸಾವಿರಾರು ಜನರ ಹೃದಯಗಳನ್ನು ಗೆದ್ದರು.


ಎನ್‍ಡಿಎ ಅಭ್ಯರ್ಥಿ ಮತ್ತು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಅಡ್ವ.,ಕೆ.ಪಿ. ಪ್ರಕಾಶ್ ಬಾಬು ಅವರು ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ಮತ್ತು ಪಿ.ವಿ. ಅನ್ವರ್ ಅವರೊಂದಿಗೆ ಪ್ರಬಲ ತ್ರಿಕೋನ ಸ್ಪರ್ಧೆಯಲಿದ್ದು ಅಮಿತ್ ಶಾ, ಅವರ ಚುನಾವಣಾ ಪ್ರಚಾರಕ್ಕಾಗಿ 32 ನಿಮಿಷಗಳ ರೋಡ್ ಶೋಗೆ ಬಂದರು. ಇದು ಮಲಬಾರ್‍ನಲ್ಲಿ ಅವರ ಏಕೈಕ ಚುನಾವಣಾ ಪ್ರಚಾರವಾಗಿತ್ತು. ಬೇಪೂರ್ ಕ್ಷೇತ್ರದ ಉತ್ತರದ ತುದಿಯಲ್ಲಿರುವ ಮಾತೋಟ್ಟಂ ವಿಜಿತ್ ಅಂಗಡಿಯಿಂದ ನಡುವಟ್ಟಂ ಹಾಲಿನ ಕಂಪನಿಯವರೆಗೆ ಈ ರೋಡ್ ಶೋ ಒಂದು ಕಿಲೋಮೀಟರ್ ದೂರ ಸಾಗಿತು. ಅಮಿತ್ ಶಾ ಮತ್ತು ಅಭ್ಯರ್ಥಿಯೊಂದಿಗೆ ಹಿರಿಯ ನಾಯಕರಾದ ಎಂ.ಟಿ. ರಮೇಶ್, ಕೆ.ಪಿ. ಶ್ರೀಶನ್ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಸುರೇಶ್ ಕೂಡ ರಥದಲ್ಲಿದ್ದರು.

ಕಾರ್ಯಕರ್ತರು ಪಂಚವಾದ್ಯ, ಕವಡಿ ಯಟ್ಟಂ ಮತ್ತು ಚೆಂಡ ಮೇಳದೊಂದಿಗೆ ನಾಯಕನನ್ನು ಸ್ವಾಗತಿಸಿದರು. ಕಾರ್ಯಕರ್ತರು ಪಕ್ಷದ ಧ್ವಜಗಳು, ವರ್ಣರಂಜಿತ ಬಲೂನ್‍ಗಳು ಮತ್ತು ಅಭ್ಯರ್ಥಿಯ ಚಿತ್ರವಿರುವ ಫಲಕಗಳನ್ನು ಹಾರಿಸುವ ಮೂಲಕ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.

ಅಮಿತ್ ಶಾ ಪ್ರಯಾಣಿಸಿದ ರಥದಲ್ಲಿ ನಾಯಕರಾದ ನಂಬಿಡಿ ನಾರಾಯಣನ್, ಕೆ.ಪಿ. ವೇಲಾಯುಧನ್, ಜಯ ಸದಾನಂದನ್, ಸಿ. ಸಬುಲಾಲ್, ರಾಜೇಶ್ ಪುನ್ನಾದ್, ಅಡ್ವ. ರಮ್ಯಾ ಮುರಳಿ, ಅಡ್ವ. ಬಿಜಿತ್ ಚೆರೋಟ್, ಶಿನು ಪಿನ್ನನಾಥ್, ಕೆ.ಸಿ. ವಲ್ಸರಾಜ್, ಶಶಿಧರನ್ ನಾರಂಗಯಿಲ್, ಚಾಂದನಿ ಹರಿದಾಸ್, ಶಶಿಧರನ್ ಪಯ್ಯನಕ್ಕಲ್, ವಿಂಧ್ಯ ಸುನಿಲ್, ಎಂ. ವಿಜಿತ್ ಮತ್ತು ಇತರರು ಉಪಸ್ಥಿತರಿದ್ದರು.

ಕುಂದಮಂಗಲಂ ಎನ್‍ಡಿಎ ಅಭ್ಯರ್ಥಿ ವಿ.ಕೆ. ಸಜೀವ್ ಕೂಡ ಅಮಿತ್ ಶಾ ಅವರನ್ನು ಬೀಳ್ಕೊಡಲು ಬಂದರು, ಅವರು ವೆಸ್ಟ್ ಹಿಲ್ ವಿಕ್ರಮ್ ಮೈದಾನದಿಂದ ಹೆಲಿಕಾಪ್ಟರ್ ಹತ್ತಿ ಕೊಚ್ಚಿಗೆ ತೆರಳಿದರು.

ಬೇಪೂರ್: ಚುನಾವಣಾ ಪ್ರಚಾರಕ್ಕಾಗಿ ಬೇಪೂರ್ ಗೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ, ವೆಸ್ಟ್ ಹಿಲ್ ಮೈದಾನದಿಂದ ಕೊಚ್ಚಿಗೆ ತೆರಳಿದರು. ಅಧಿಕೃತವಾಗಿ ನಿಗದಿಯಂತೆ, ಬೇಪೂರ್ ನಲ್ಲಿ ರೋಡ್ ಶೋ ನಂತರ ಅವರು ಬೇಪೂರ್ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾದ ಹೆಲಿಕಾಪ್ಟರ್‍ನಿಂದ ಕೊಚ್ಚಿಗೆ ಹಿಂತಿರುಗಬೇಕಿತ್ತು.

ಆದಾಗ್ಯೂ, ಅವರು ಮಧ್ಯಾಹ್ನ 12 ಗಂಟೆಗೆ 'ಮಿಲ್ಮಾ' ಮುಂದೆ ರೋಡ್ ಶೋ ಮುಗಿಸಿ ವೆಸ್ಟ್‍ಹಿಲ್ ಮೈದಾನದಿಂದ ಹೆಲಿಕಾಪ್ಟರ್‍ನಲ್ಲಿ ಕೊಚ್ಚಿಗೆ ತೆರಳಿದರು.

ಸಚಿವರ ಪ್ರಯಾಣ ವೇಳಾಪಟ್ಟಿಯಲ್ಲಿನ ಈ ಬದಲಾವಣೆಯು ಬೇಪೂರ್ ದಕ್ಷಿಣ ಕರಾವಳಿ ಪ್ರದೇಶಗಳ ನಿವಾಸಿಗಳ ಗಮನಕ್ಕೆ ಬರಲಿಲ್ಲ. ಬೇಪೂರ್  ಬಿ.ಸಿ. ರಸ್ತೆಯಿಂದ ಸಚಿವರ ಆಗಮನಕ್ಕಾಗಿ ನೂರಾರು ಜನರು ಕಾಯುತ್ತಿದ್ದರು. ಬಿ.ಸಿ. ರಸ್ತೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಮಿಲ್ಮಾ ಕಂಪನಿ ಆವರಣದಲ್ಲಿ ಸಚಿವರು ರಥದಿಂದ ಇಳಿದು 12 ಗಂಟೆಗೆ ಕೋಝಿಕ್ಕೋಡ್‍ಗೆ ಮರಳಿದರು. ಇದರೊಂದಿಗೆ, ಅವರಿಗಾಗಿ ಕಾಯುತ್ತಿದ್ದ ಜನರು ನಿರಾಶೆಗೊಂಡರು. ಬೇಪೂರ್ ನಲ್ಲಿ ಅಮಿತ್ ಶಾ ಅವರಿಗೆ ಫಾರೂಖ್ ಸಹಾಯಕ ಪೆÇಲೀಸ್ ಆಯುಕ್ತ ಪ್ರೇಮ್‍ಜಿತ್ ನೇತೃತ್ವದಲ್ಲಿ ಬಲವಾದ ಪೋಲೀಸ್ ಪಡೆ ಭದ್ರತೆ ಒದಗಿಸಿತು. ನಗರದ ವಿವಿಧ ಪೋಲೀಸ್ ಠಾಣೆಗಳ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ದೊಡ್ಡ ಪೆÇಲೀಸ್ ಪಡೆ ಬೇಪೆÇೀರ್‍ನಲ್ಲಿ ನಿಯೋಜಿಸಲಾಗಿತ್ತು.

ಬೇಪೂರ್ ಪೇಟೆಯಿದ ಮಾತೋಟ್ಟಂವರೆಗೆ ನೂರಾರು  ಬಿಜೆಪಿ ಕಾರ್ಯಕರ್ತರು ಅಮಿತ್ ಶಾ ಅವರ ರೋಡ್ ಶೋ ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಶನಿವಾರ ರಾತ್ರಿ ದೆಹಲಿಯಿಂದ ಕರಿಪ್ಪೂರ್  ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ, ರಾಮನಾಟ್ಟುಕರದ ಕಡವು ರವೀಜ್ ರೆಸಾರ್ಟ್‍ನಲ್ಲಿ ತಂಗಿದ್ದರು. ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರು ಬೇಪೂರ್ ವಿಜಿತ್ ಥಿಯೇಟರ್ ಬಳಿ ಸ್ಥಾಪಿಸಲಾದ ವಿಜಯಾರಥಿಯನ್ನು ಹತ್ತಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries